masthmagaa.com:
ನಿನ್ನೆ ರಾಜ್ಯಸಭೆಯಲ್ಲಿ ಕೆಲವೊಂದು ಪ್ರಮುಖ ಬಿಲ್ಗಳು ಪಾಸ್ ಆಗುವಾಗ ಬಿಜೆಪಿ ಕೆಲವೊಂದು ಸಂಸದರು ಗೈರಾಗಿದ್ರು. ಈಗ ಅವರಿಗೆ ಬುಡಕ್ಕೆ ಬಂದಂಗಾಗಿದೆ. ಯಾಕಂದ್ರೆ ಬಿಲ್ ಪಾಸ್ ಆಗೋವಾಗ ಯಾರೆಲ್ಲಾ ಇರಲಿಲ್ಲ ಅಂಥವರ ಹೆಸರು ಕೊಡಿ ಅಂತ ಪ್ರಧಾನಿ ಮೋದಿ ಕೇಳಿದ್ದಾರೆ ಅಂತ ಮೂಲಗಳು ತಿಳಿಸಿವೆ. ನಿನ್ನೆ ಮತ್ತು ಇವತ್ತು ಮಹತ್ವದ ಬಿಲ್ ಪಾಸ್ ಆಗಲಿವೆ. ಹೀಗಾಗಿ ಎಲ್ಲಾ ಬಿಜೆಪಿ ಸಂಸದರು ಹಾಜರಿರಬೇಕು ಅಂತ ಸೂಚಿಸಲಾಗಿತ್ತು. ಆದ್ರೂ ಕೆಲೋರು ಚಕ್ಕರ್ ಹೊಡೆದಿದ್ದಾರೆ. ಸಂಸದರ ಗೈರಿನ ಬಗ್ಗೆ ಇವತ್ತು ನಡೆದ ಪಕ್ಷ ಸಭೆಯಲ್ಲೂ ಪ್ರಸ್ತಾಪವಾಗಿದೆ. ಮೋದಿ ಫುಲ್ ಬೇಜಾರ್ ಮಾಡ್ಕೊಂಡಿದ್ದಾರೆ ಅಂತ ಗೊತ್ತಾಗಿದೆ.
-masthmagaa.com
Contact Us for Advertisement