masthmagaa.com:
ಭಾರತದಲ್ಲಿ ಮುಸ್ಲಿಂರು ಹಸುಗಳನ್ನ ಸಾಕಬೇಕು ಹಾಗೂ ತಮ್ಮ ಆಹಾರ ಪದ್ಧತಿಯಲ್ಲಿ ಸಸ್ಯಹಾರವನ್ನ ಅಳವಡಿಸಿಕೊಳ್ಳಬೇಕು ಅಂತ ಮಧ್ಯಪ್ರದೇಶ IAS ಅಧಿಕಾರಿ ನಿಯಾಜ್ ಖಾನ್ ತಿಳಿಸಿದ್ದಾರೆ. ದೇಶದಲ್ಲಿ ಮತಾಂತರ ಆಗ್ತಿರೋದಕ್ಕೆ ಬಾಲಿವುಡ್ ಕಾರಣ ಅಂತ ಆರೋಪಿಸಿದ್ದಾರೆ. ಜೊತೆಗೆ ಇಸ್ಲಾಂ ಧರ್ಮಕ್ಕೆ ಮತಾಂತರ ಆಗುವಂತೆ ಇತರ ಧರ್ಮದವ್ರನ್ನ ಒತ್ತಾಯಿಸಬಾರದು. ಹಸುಗಳನ್ನ ಸಾಕಿ ಅವುಗಳನ್ನ ರಕ್ಷಿಸಬೇಕು ಹಾಗೂ ಆಹಾರ ಪದ್ಧತಿಯಲ್ಲಿ ಸಸ್ಯಹಾರವನ್ನ ರೂಢಿಸಿಕೊಳ್ಳಬೇಕು. ಅಷ್ಟೆ ಅಲ್ದೆ ಬ್ರಾಹ್ಮಣ ಸಮುದಾಯದ ಜೊತೆ ಮುಸ್ಲಿಂರು ಉತ್ತಮ ಬಾಂಧವ್ಯ ಹೊಂದಬೇಕು ಅಂತ ತಿಳಿಸಿದ್ದಾರೆ. ಇದೇ ವೇಳೆ ದೇಶದಲ್ಲಿ ಅನೇಕ ಸಂಘಟನೆಗಳು ಇಸ್ಲಾಂನ ಪ್ರತಿಷ್ಠೆಯನ್ನ ಹಾಳು ಮಾಡಿವೆ ಅಂತ ನಿಯಾಜ್ ಆರೋಪಿಸಿದ್ದಾರೆ.
-masthmagaa.com
Contact Us for Advertisement