masthmagaa.com:
ಕಾಶ್ಮೀರದಲ್ಲಿ ಹಿಂದೂಗಳನ್ನ ಗುರಿಯಾಗಿಸಿಕೊಂಡು ನಡೀತಿರೋ ಉಗ್ರದಾಳಿಗಳ ಹಿಂದೆ ಪಾಕಿಸ್ತಾನದ ಕೈವಾಡ ಇದೆ ಅಂತ ಗುಪ್ತಚರ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಕಾಶ್ಮೀರದಲ್ಲಿ ಭುಗಿಲೆದ್ದಿರೋ ಅಶಾಂತಿಯುಕ್ತ ವಾತಾವರಣಕ್ಕೆ ಸಂಬಂಧಪಟ್ಟಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾ ನೇತೃತ್ವದಲ್ಲಿ ನಿನ್ನೆ ಉನ್ನತ ಮಟ್ಟದ ಸಭೆ ನಡೆಸಲಾಯಿತು. ಈ ವೇಳೆ ಕಾಶ್ಮೀರದಲ್ಲಿನ ಸಮಸ್ಯೆಗಳ ಕುರಿತು ಮಾಹಿತಿ ಕೊಟ್ಟಿರೋ ಇಂಟಲಿಜೆನ್ಸ್ ಅಧಿಕಾರಿಗಳು ʻಕಾಶ್ಮೀರ ಭಾಗದಲ್ಲಿ ಪರಿಸ್ಥಿತಿ ಹದಗೆಡಿಸೋಕೆ ಪಾಕಿಸ್ತಾನ ಪ್ಲಾನ್ ಮಾಡ್ತಿದೆ. ಇದರಲ್ಲಿ ತಾಲಿಬಾನ್ ಕೈವಾಡ ಇದೆ ಅನ್ನೋ ಬಗ್ಗೆ ನಮಗೆ ಸರಿಯಾದ ಆಧಾರ ಲಭ್ಯವಾಗಿಲ್ಲ. ಕಾಶ್ಮೀರದಲ್ಲಿ ಈಗ ಜಿಹಾದ್ ನಡೀತಿಲ್ಲ. ಪರಿಸ್ಥಿತಿ ಮಾತ್ರ ವಿಕೋಪಕ್ಕೆ ತಿರುಗಿಸೋ ಪ್ರಯತ್ನ ಮಾಡಲಾಗ್ತಿದೆ ಅಂತ ಹೇಳಿದ್ದಾರೆ. ಇತ್ತ ಕಾಶ್ಮೀರದಲ್ಲಿ ಹಿಂದೂ ಉದ್ಯೋಗಿಗಳು ತಮ್ಮ ಪ್ರತಿಭಟನೆ ಮುಂದುವರೆಸಿದ್ದಾರೆ. ಈ ವೇಳೆ ಮಾತನಾಡಿದ ಪ್ರತಿಭಟನಾಕಾರರೊಬ್ಬರು ಕೇಂದ್ರ ಸರ್ಕಾರ ನಮ್ಮನ್ನ ಇಲ್ಲಿ ಕೂಡಿ ಹಾಕಿದೆ. ಕಾಶ್ಮೀರದಿಂದ ಹೊರಗೆ ಹೋಗಲು ಬಿಡಿ. ಇಲ್ಲ ಪೊಲೀಸರ ಮೇಲೆ ನಾವೂ ಕಲ್ಲು ತೂರುತ್ತೇವೆ ಅಂತ ಎಚ್ಚರಿಕೆ ನೀಡಿದ್ದಾರೆ.
-masthmagaa.com
Contact Us for Advertisement