masthmagaa.com:
ಕಳೆದ ವರ್ಷ ಲಡಾಖ್ ಪೂರ್ವ ಭಾಗದ ಗಾಲ್ವಾನ್ ಕಣಿವೆಯಲ್ಲಿ ಭಾರತ ಮತ್ತು ಚೀನಾ ಸೇನೆಯ ಯೋಧರು ಕಲ್ಲು, ದೊಣ್ಣೆ, ರಾಡ್ಗಳಿಂದ ಹೊಡೆದಾಡಿಕೊಂಡಿದ್ದು ಎಲ್ಲರಿಗೂ ಗೊತ್ತಿರೋ ವಿಚಾರ. ಅದಾಗಿ 4 ತಿಂಗಳ ಬಳಿಕ, ಗಾಲ್ವಾನ್ ಕಣಿವೆಯಿಂದ ಸುಮಾರು 1,500 ಕಿಲೋ ಮೀಟರ್ ದೂರದಲ್ಲಿರೋ ಮುಂಬೈನಲ್ಲಿ ಅಕ್ಟೋಬರ್ 12ರಂದು ದಿಢೀರ್ ಅಂತ ಕರೆಂಟ್ ಕೈಕೊಟ್ಟಿತ್ತು. ಕರೆಂಟ್ ಇಲ್ಲದೆ ರೈಲು ಸಂಚಾರ ನಿಂತು ಹೋಗಿತ್ತು, ಷೇರ್ ಮಾರ್ಕೆಟ್ ಬಂದ್ ಆಗಿತ್ತು, ಕೊರೋನಾ ಹಾಟ್ಸ್ಪಾಟ್ ರೀತಿ ಆಗಿದ್ದ ಮುಂಬೈನ ಆಸ್ಪತ್ರೆಗಳಲ್ಲಿ ವೆಂಟಿಲೇಟರ್ ಕೆಲಸ ಮಾಡುತ್ತಿರೋಕೆ ಜನರೇಟರ್ಗಳನ್ನ ಆನ್ ಮಾಡಬೇಕಾಗಿತ್ತು.. ಒಂದ್ ರೀತಿ 2 ಕೋಟಿ ಜನರಿರುವ ಮುಂಬೈ ನಗರ ಕತ್ತಲೆಗೆ ಜಾರಿತ್ತು. ಆದ್ರೀಗ ಗಡಿಯಲ್ಲಿ ಚೀನಾ ಜೊತೆ ನಡೆದ ಗಲಾಟೆಗೂ, ಮುಂಬೈನಲ್ಲಿ ಕರೆಂಟ್ ಕೈಕೊಟ್ಟಿದ್ದಕ್ಕೂ ಸಂಬಂಧವಿತ್ತು ಅಂತ ಹೇಳಲಾಗ್ತಿದೆ. ಗಡಿಯಲ್ಲಿ ಸಂಘರ್ಷ ನಡೀತಿರುವಾಗಲೇ ಚೀನಾ ಭಾರತದ ಮೇಲೆ ಸೈಬರ್ ಅಟ್ಯಾಕ್ ಮಾಡಿತ್ತಾ ಅನ್ನೋ ಅನುಮಾನ ದಟ್ಟವಾಗ್ತಿದೆ. ಭಾರತದ ಪವರ್ ಗ್ರಿಡ್ಗಳನ್ನ ಹ್ಯಾಕ್ ಮಾಡಿದ್ದ ಚೀನೀ ಹ್ಯಾಕರ್ಗಳು ದೇಶದ ಕರೆಂಟ್ ಸಪ್ಲೈಯನ್ನ ಮ್ಯಾನೇಜ್ ಮಾಡೋ ಕಂಟ್ರೋಲ್ ಸಿಸ್ಟಂಗೆ ವೈರಸ್ ಬಿಟ್ಟಿದ್ರು ಅನ್ನೋ ವರದಿ ಈಗ ಕೇಂದ್ರ ಸರ್ಕಾರದ ಕೈ ಸೇರಿದೆ. ಈ ಮೂಲಕ ಗಡಿಯಲ್ಲೇನಾದ್ರೂ ಭಾರತ ಜಾಸ್ತಿ ಶಕ್ತಿ ಪ್ರದರ್ಶಿಸಿದ್ರೆ ಇಡೀ ದೇಶವನ್ನೇ ಕತ್ತಲೆ ಕೋಣೆ ಮಾಡ್ತೀವಿ ಅನ್ನೋ ವಾರ್ನಿಂಗ್ ಚೀನಾ ಕೊಟ್ಟಿತ್ತು ಅಂತಾನೇ ಈ ವರದಿಯಲ್ಲಿ ಹೇಳಲಾಗ್ತಿದೆ. ಅಮೆರಿಕದ ಮೆಸಾಚುಸೆಟ್ಸ್ನ ರೆಕಾರ್ಡೆಡ್ ಫ್ಯೂಚರ್ ಅನ್ನೋ ಕಂಪನಿ ನಡೆಸಿದ ಅಧ್ಯಯನದಲ್ಲಿ ಈ ವಿಚಾರ ಗೊತ್ತಾಗಿದೆ. ಚೀನಾ ಸರ್ಕಾರಿ ಪ್ರಾಯೋಜಿತ ರೆಡ್ ಈಕೋ (Red Echo) ಅನ್ನೋ ಗುಂಪು ಈ ಕಿತಾಪತಿ ಮಾಡಿರ್ಬೋದು ಅಂತ ವರದಿಯಲ್ಲಿದೆ. ಇನ್ನೊಂದು ಇಂಟರೆಸ್ಟಿಂಗ್ ವಿಚಾರ ಅಂದ್ರೆ ಚೀನಿ ಹ್ಯಾಕರ್ಗಳು ಬಿಟ್ಟಿದ್ದ ವೈರಸ್ಗಳಲ್ಲಿ ಸಾಕಷ್ಟು ವೈರಸ್ಗಳು ಆಕ್ಟಿವೇಟ್ ಆಗಿರಲಿಲ್ಲವಂತೆ. ಒಂದ್ವೇಳೆ ಎಲ್ಲವೂ ಆಕ್ಟಿವೇಟ್ ಆಗಿದ್ರೆ ಬಹುಶಃ ಇಡೀ ಮಹಾರಾಷ್ಟ್ರ ಅಥವಾ ಇಡೀ ದೇಶದಲ್ಲೇ ಕರೆಂಟ್ ಸಮಸ್ಯೆ ಉಂಟಾಗ್ತಿತ್ತೇನೋ. ಈ ಚೀನಾದವರು ಏನ್ ಬೇಕಾದ್ರೂ ಮಾಡ್ತಾರೆ ಅನ್ನೋದಕ್ಕೆ ಇದೊಂದು ಎಕ್ಸಾಂಪಲ್. ರೆಕಾರ್ಡೆಡ್ ಫ್ಯೂಚರ್ ಕಂಪನಿಯ ಈ ಅಧ್ಯಯನ ವರದಿ ಬೆನ್ನಲ್ಲೇ ಮಹಾರಾಷ್ಟ್ರ ಸರ್ಕಾರ ಸೈಬರ್ ಡಿಪಾರ್ಟ್ಮೆಂಟ್ನಿಂದ ವರದಿ ಕೇಳಿದೆ.
-masthmagaa.com
Contact Us for Advertisement