“ರಾಜಕೀಯಕ್ಕಾಗಿ ಸಿನಿಮಾ ಬಿಡಬಾರದು”: ನಿರ್ಮಾಪಕ ರಾಜನ್‌ ವಿಜಯ್‌ಗೆ ಟೀಕೆ !

masthmagaa.com:

ಸಿನಿಮಾ ನಟ ನಟಿಯರು ಸಿನಿಮಾ ರಂಗದ ಜೊತೆಗೆ ರಾಜಕೀಯಕ್ಕೂ ಕೈ ಹಾಕೋದು ಹೊಸದೇನಲ್ಲ. ಹಾಗೇನೆ ತಮಿಳಿನ ವಿಜಯ್‌ ಖುಡ ರಾಜಕೀಯಕ್ಕೆ ಬರೋ ಪ್ಲಾನ್‌ ಮಾಡಿದ್ದಾರೆ ಅಂತ ಎಲ್ಲೆಡೆ ಸುದ್ದಿಯಾಗಿತ್ತು. ರಾಜಕೀಯಕ್ಕೆ ಬರ್ತಾರೆ ಅನ್ನೋ ಸುದ್ದಿ ಹಬ್ಬಿದಂತೆ ಹಲವಾರು ಟೀಕೆಗಳು ಸಹ ಬರ್ತಾ ಇದೆ. ಈ ಬಗ್ಗೆ ನಿರ್ಮಾಪಕ ಕೆ ರಾಜನ್ ಕೂಡ ಪ್ರತಿಕ್ರಿಯೆ ಕೊಟ್ಟಿದ್ದಾರೆ.

“ವಿಜಯ್​ಗೆ ರಾಜಕೀಯಕ್ಕೆ ಪ್ರವೇಶಿಸುವ ಇಚ್ಛೆ ಇದ್ದರೆ ಪ್ರವೇಶಿಸಲು ಅವರನ್ನು ತಡೆಯಲು ಯಾರಿಗೂ ಸಾಧ್ಯವಿಲ್ಲ. ಅದು ಅವರ ಇಷ್ಟ. ಒಂದೊಮ್ಮೆ ವಿಜಯ್ ಒಳ್ಳೆಯ ರಾಜಕಾರಣ ಮಾಡಿದರೆ ಜನರೇ ಅವರ ಬೆನ್ನಿಗೆ ನಿಲ್ಲುತ್ತಾರೆ. ಆದರೆ ರಾಜಕೀಯಕ್ಕಾಗಿ ಸಿನಿಮಾ ವೃತ್ತಿಯನ್ನು ಬಿಡುವುದು ಒಳ್ಳೆದಲ್ಲ. ಅವರು ಒಳ್ಳೆಯ ನಟ ಅವರು ಇನ್ನೂ ಹೆಚ್ಚು-ಹೆಚ್ಚು ಸಿನಿಮಾಗಳನ್ನ ಮಾಡಬೇಕು” ಅಂತ ಹೇಳಿದ್ದಾರೆ.

-masthmagaa.com

 

Contact Us for Advertisement

Leave a Reply