ಅಮಾನವೀಯ ಘಟನೆ.. ನಾಯಿ ಗ್ಯಾಂಗ್​​​ಗೆ ಬಲಿಯಾದ ಬಾಲಕ!

masthmagaa.com:

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಅಮಾನವೀಯ ಘಟನೆಯೊಂದು ವರದಿಯಾಗಿದೆ. ಕಳ್ಳತನದ ಆರೋಪದಲ್ಲಿ 16 ವರ್ಷದ ಹುಡುಗನನ್ನು ಥಳಿಸಲಾಗಿದ್ದು, ನಂತರ ನಾಯಿ ಗ್ಯಾಂಗ್ ದಾಳಿಗೆ ಪ್ರಾಣವನ್ನೇ ಕಳೆದುಕೊಂಡಿದ್ದಾನೆ. ಇಲ್ಲಿನ ಕಾಪಶೇರಾದಲ್ಲಿ ಮೂವರು ಬಾಲಕರು ಫಾರ್ಮ್​​​ಹೌಸ್​ ಒಂದಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಇದನ್ನು ಕಂಡ ಆ ಫಾರ್ಮ್​ ಹೌಸ್​​ನ ಗಾರ್ಡ್​​​​, ಮಾಲೀಕರಿಗೆ ಮಾಹಿತಿ ನೀಡಿದ್ದಾನೆ. ಮಾಲೀಕ ಸ್ಥಳಕ್ಕೆ ಬಂದಾಗ ಇಬ್ಬರು ಓಡಿಹೋಗಿದ್ದು, 16 ವರ್ಷದ ಹುಡುಗ ಸಂದೀಪ್ ಮಹ್ತೋ ತಗಲಾಕ್ಕೊಂಡಿದ್ದಾನೆ. ಈ ವೇಳೆ ಮಾಲೀಕ ದೊಣ್ಣೆಯಿಂದ ಹಿಗ್ಗಾಮುಗ್ಗ ಥಳಿಸಿ, ಹೊರದಬ್ಬಿದ್ಧಾನೆ. ರಸ್ತೆಯಲ್ಲಿ ಬಿದ್ದು ನರಳುತ್ತಿದ್ದ ಬಾಲಕನ ಮೇಲೆ ನಾಯಿಗ್ಯಾಂಗ್ ದಾಳಿ ಮಾಡಿದೆ. ಇದ್ರಿಂದ ಮತ್ತಷ್ಟು ಗಂಭೀರಗೊಂಡ ಬಾಲಕ ರಸ್ತೆಯಲ್ಲೇ ಒದ್ದಾಡಿ ಜೀವ ಬಿಟ್ಟಿದ್ದಾನೆ. ಸದ್ಯ ಫಾರ್ಮ್​ ಹೌಸ್ ಮಾಲೀಕ ತಲೆ ಮರೆಸಿಕೊಂಡಿದ್ದು, ಕೊಲೆ ಕೇಸ್ ದಾಖಲಿಸಿ ಪೊಲೀಸರು ಹುಡುಕ್ತಿದ್ದಾರೆ. ಬಾಲಕರು ಫಾರ್ಮ್​​ಹೌಸ್​​ಗೆ ಹೋಗಿದ್ಯಾಕೆ ಅಂತ ಪೊಲೀಸರು ತನಿಖೆ ನಡೆಸ್ತಿದ್ದಾರೆ.

-masthmagaa.com

Contact Us for Advertisement

Leave a Reply