masthmagaa.com:
ಈಗಾಗಲೇ ರಾಜ್ಯದಲ್ಲಿ ಕೊರೋನಾದ ಹೊಸ ತಳಿ ಬಂದಿರೋ ಬಗ್ಗೆ ಮಾಹಿತಿ ಇದೆ. ಇದ್ರ ಬೆನ್ನಲ್ಲೇ ಯಾರೂ ಕೂಡ ಕೊರೋನ ಮರೆತು ಹಬ್ಬ ಆಚರಣೆ ಮಾಡ್ಬೇಡಿ ಅಂತ ಕೋವಿಡ್ ಸಲಹಾ ಸಮಿತಿ ಅಧ್ಯಕ್ಷರಾಗಿರುವ ದೇವಿಶೆಟ್ಟಿ ಹೇಳಿದ್ದಾರೆ. ಕೊರೋನಾ ಎರಡ್ಮೂರು ವರ್ಷ ಇರುತ್ತೆ. ಹಾಗಾಗಿ ದೀಪಾವಳಿ ಹಬ್ಬವನ್ನ ಬಹಳ ಎಚ್ಚರಿಕೆ ಯಿಂದ ಆಚರಿಸಿ. ಮಾಸ್ಕ್ ಹಾಕೋಳ್ಳದನ್ನ ಸಾಮಾಜಿಕ ಅಂತರವನ್ನ ಯಾವುದೇ ಕಾರಣಕ್ಕು ಮರಿಬಾರ್ದು. ಕುಟುಂಬದವರು ಒಟ್ಟು ಸೇರಿ ಹಬ್ಬ ಆಚರಿಸಿ. ಆದ್ರೆ ಗುಂಪು ಸೇರುವಂತಹ ತಪ್ಪು ಮಾಡ್ಬೇಡಿ. ಮೂರನೆ ಅಲೆ ಎರಡನೆ ಅಲೆಯಷ್ಟು ಪ್ರಭಾವ ಬೀರದೆ ಇರ್ಬೋದು. ಆದ್ರೆ ಹೊಸ ಹೊಸ ವೈರಸ್ ಹೇಗೆ ಇರುತ್ತೆ ಅಂತ ಹೇಳಲು ಸಾಧ್ಯ ಇಲ್ಲ ಅಂತ ಹೇಳಿದ್ದಾರೆ.
-masthmagaa.com
Contact Us for Advertisement