masthmagaa.com:
ಸಿಎಂ ಕಚೇರಿಯಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ ಅಂತ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಆರೋಪಕ್ಕೆ ಡಿಸಿಎಂ ಡಿ.ಕೆ ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ. ಚುನಾವಣೆಯಲ್ಲಿ ಕಡಿಮೆ ಸ್ಥಾನ ಗೆದ್ದಿರೋದಕ್ಕೆ ಕುಮಾರಸ್ವಾಮಿ ಹತಾಷರಾಗಿ ಇಲ್ಲಸಲ್ಲದ ಆರೋಪಗಳನ್ನ ಮಾಡ್ತಿದಾರೆ. ಕುಮಾರಸ್ವಾಮಿ ಅವ್ರು ಮಾಡ್ತಿರೋ ಆರೋಪಗಳೆಲ್ಲ ಸತ್ಯಕ್ಕೆ ದೂರವಾಗಿದ್ದು, ಲಂಚದಿಂದ ನಮ್ಮ ಸರ್ಕಾರ ಬಹಳ ದೂರವಿದೆ ಅಂತ ಹೇಳಿದ್ದಾರೆ. ಜೊತೆಗೆ ಭ್ರಷ್ಟಾಚಾರ ನಡೆದಿರೋ ಬಗ್ಗೆ ಕುಮಾರಸ್ವಾಮಿಯವ್ರ ಹತ್ತಿರ ದಾಖಲೆಗಳಿದ್ರೆ ಸರ್ಕಾರವೇ ರಚಿಸಿದ ಲೋಕಾಯುಕ್ತ ಇದೆ, ಅಲ್ಲಿಗೆ ಹೋಗಿ ದೂರು ಕೊಡ್ಲಿ ಅಂತ ಹೇಳಿದ್ದಾರೆ. ಅಂದ್ಹಾಗೆ ಸಿಎಂ ಕಚೇರಿಗಳಲ್ಲಿನ ವ್ಯವಹಾರಗಳನ್ನ ಸಿಎಂ ಸಿದ್ದರಾಮಯ್ಯನವ್ರ ಮಗ ಯತೀಂದ್ರ ಸಿದ್ದರಾಮಯ್ಯ ನೋಡಿಕೊಳ್ಳುತ್ತಿದ್ದು, ರಾಜ್ಯದಲ್ಲಿ `YST’ ತೆರಿಗೆ ಶುರುವಾಗಿದೆ ಅಂತ HDK ಪರೋಕ್ಷವಾಗಿ ಯತೀಂದ್ರ ಅವ್ರ ಮೇಲೆ ಆರೋಪ ಮಾಡಿದ್ರು.
-masthmagaa.com
Contact Us for Advertisement