masthmagaa.com:
ಸಂಸತ್ತಿನಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಮಾಡಿದ್ದ ವಾಗ್ದಾಳಿಗೆ ಇಂದು ಪ್ರಧಾನಿ ಮೋದಿ ತಿರುಗೇಟು ನೀಡಿದ್ದಾರೆ. ʻನಿನ್ನೆ ಲೋಕಸಭೆಯಲ್ಲಿ ಕೆಲವರ ಭಾಷಣದಿಂದ ಅವ್ರ ಬೆಂಬಲಿಗರು ತುಂಬಾ ಖುಷಿಯಾಗಿದ್ರು. ನಾನು ನೋಡ್ತಾ ಇದ್ದೆ ಸದನದ ಫುಲ್ ವಾತಾವರಣ ಆನಂದದಲ್ಲಿ ತೇಲಾಡ್ತಾ ಇತ್ತು. ಕೆಲವ್ರಂತು ಮಾತು ಅಂದ್ರೆ ಇದು ಅಂತ ಸಂತೋಷ ವ್ಯಕ್ತಪಡಿಸ್ತಾ ಇದ್ರು. ಅದೇ ಖುಷಿಗೆ ನಿನ್ನೆ ರಾತ್ರಿ ಚನ್ನಾಗಿ ನಿದ್ದೆ ಮಾಡಿದ್ದಾರೆ ಅನ್ಸುತ್ತೆ. ಅದಕ್ಕೆ ಇವತ್ತು ಎದ್ದು ಅಧಿವೇಶನಕ್ಕೆ ಬರೋದಕ್ಕೆ ಆಗಿಲ್ಲ ಅಂತ ಮೋದಿ ವ್ಯಂಗ್ಯವಾಡಿದ್ದಾರೆ. ಯಾಕಂದ್ರೆ ಇಂದಿನ ಅಧಿವೇಶನಕ್ಕೆ ರಾಹುಲ್ ಲೇಟಾಗಿ ಹಾಜರಾಗಿದ್ರು ಹಾಗಾಗಿ. ಮುಂದುವರೆದು ಮಾತನಾಡಿದ ಮೋದಿ, ಕೆಲವರು ಕಳೆದ 9 ವರ್ಷದಲ್ಲಿ ಭಾರತ ಮಾಡಿರೋ ಸಾಧನೆಯನ್ನ ಒಪ್ಪಿಕೊಳ್ಳೋಕೆ ರೆಡಿಯಿಲ್ಲ. 2004 ರಿಂದ 2014ರಲ್ಲಿ ಕಾಂಗ್ರೆಸ್ ಆಡಳಿತ ಇದ್ದಾಗ ಅತಿಹೆಚ್ಚು ಭ್ರಷ್ಟಾಚಾರ ಕೇಸ್ಗಳು ದಾಖಲಾಗಿವೆ. ಆ 10 ವರ್ಷಗಳು ಹಗರಣಗಳ ದಶಕವಾಗಿತ್ತು..ಹಿಂಸಾಚಾರದ ಜೊತೆಗೆ ಎಲ್ಲಾ ವ್ಯಾಪಾರ ಅವಕಾಶಗಳನ್ನ ಬಿಕ್ಕಟ್ಟಿನಂತೆ ಬದಲಾಯಿಸಲಾಗಿತ್ತು. ಅಷ್ಟೆ ಅಲ್ದೆ ಆ ಸಮಯದಲ್ಲಿ ಜಾಗತಿಕವಾಗಿ ಭಾರತ ತನ್ನ ಧ್ವನಿಯನ್ನ ಕಳೆದುಕೊಂಡಿತ್ತು ಅಂತ ಮೋದಿ ತೀವ್ರ ವಾಗ್ದಾಳಿ ಮಾಡಿದ್ದಾರೆ. ಅಲ್ದೇ ಕೆಲವರು ಕೇವಲ ಅವ್ರಿಗಾಗಿ ಮತ್ತು ಅವ್ರ ಕುಟುಂಬಕ್ಕಾಗಿ ಬದುಕಿದ್ದಾರೆ. ಆದ್ರೆ ಮೋದಿ ಬದುಕಿರೋದು ಭಾರತದ ಜನರಿಗಾಗಿ. ಕಾಂಗ್ರೆಸ್ ಮೋದಿಯನ್ನ ಟೀಕಿಸುವಲ್ಲಿ ಬ್ಯುಸಿಯಾಗಿದ್ರೆ, ಅತ್ತ 140 ಕೋಟಿ ಜನರು ನರೇಂದ್ರ ಮೋದಿಯ ರಕ್ಷಾ ಕವಚವಾಗಿದ್ದಾರೆ ಅಂತ ಮೋದಿ ಹೇಳಿದ್ದಾರೆ. 22 ವರ್ಷ..ಇಡೀ ಜೀವನ ದೇಶ ಸೇವೆಗೆ..
-masthmagaa.com
Contact Us for Advertisement