ಈಶ್ವರಪ್ಪಗೆ ಹಾರ್ಟ್‌ ಬ್ರೇಕ್‌: ಕರೆದು ವಾಪಸ್‌ ಕಳಿಸಿದ ಅಮಿತ್‌ ಶಾ!

masthmagaa.com:

ಇತ್ತೀಚೆಗಷ್ಟೇ ರಾಜ್ಯಕ್ಕೆ ಭೇಟಿ ನೀಡಿದ್ದ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವ್ರು ಶಿವಮೊಗ್ಗದಲ್ಲಿ ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ಸಜ್ಜಾಗಿರೊ ಕೆಎಸ್‌ ಈಶ್ವರಪ್ಪ ಅವ್ರಿಗೆ ದೆಹಲಿಗೆ ಬರುವಂತೆ ಸೂಚಿಸಿದ್ರು. ಇದೀಗ ಶಾ ಅವ್ರ ಸೂಚನೆಯಂತೆ ದೆಹಲಿಗೆ ಹೋಗಿರೋ ಈಶ್ವರಪ್ಪ ಅಮಿತ್‌ ಶಾರನ್ನ ಮೀಟ್‌ ಮಾಡದೇ ಬರಿಗೈಯಲ್ಲಿ ವಾಪಸ್‌ ಆಗಿದ್ದಾರೆ. ಎಸ್‌…ಈ ಬಗ್ಗೆ ಪ್ರತಿಕ್ರಿಯೆ ನೀಡಿರೋ ಕೆಎಸ್‌ ಈಶ್ವರಪ್ಪ, ʻಅಮಿತ್‌ ಶಾರಂತಹ ಗಣ್ಯರು ಮನೆಗೆ ಬನ್ನಿ ಅಂತ ಕರೆದಾಗ ಗೌರವ ಕೊಟ್ಟು ದೆಹಲಿಗೆ ಹೋಗಿದ್ದೆ. ಆದ್ರೆ ಅಮಿತ್‌ ಶಾ ಅವ್ರು ಮನೇಲಿ ಇರಲಿಲ್ಲ. ಭೇಟಿ ಮಾಡೋ ಅವಶ್ಯಕತೆಯಿಲ್ಲ ಅಂದ್ರು. ವಾಪಾಸ್‌ ಹೋಗ್ಲಾ ಅಂತ ಕೇಳಿದಾಗ.. ವಾಪಸ್‌ ಹೋಗಿ ಅಂತಂದ್ರು. ಸೋ..ಅವ್ರ ಅಭಿಪ್ರಾಯವೂ ನಾನು ಚುನಾವಣೆಗೆ ಕಾಂಟೆಸ್ಟ್‌ ಮಾಡೋದೇ ಆಗಿತ್ತು…ಅದಕ್ಕೆ ಅವ್ರು ನನ್ನನ್ನ ಭೇಟಿಯಾಗಿಲ್ಲʼ ಅಂದಿದ್ದಾರೆ.

-masthmagaa.com

Contact Us for Advertisement

Leave a Reply