ನಾನೂ ಒಂದು ತಪ್ಪು ಮಾಡಿದ್ದೀನಿ, ಆದ್ರೆ ಅದನ್ನ ತಿದ್ದಿಕೊಳ್ಳಬೇಕು..

masthmagaa.com:

6 ಸಚಿವರು ಕೋರ್ಟ್​ಗೆ ಹೋಗಿ ಸ್ಟೇ ತಂದ್ರೆ ಜನ ಏನು ತಿಳ್ಕೊಬೇಕು. ಇನ್ನೂ 6 ಜನ ಕೋರ್ಟ್​ಗೆ ಹೋಗ್ಬೇಕು ಅಂದುಕೊಂಡಿದ್ರು. ಆದ್ರೆ ನಾನಾ ರೀತಿಯ ಮಾತು ಕೇಳಿ ಬಂದಿದ್ದಕ್ಕೆ ಅವರು ಹಿಂದೆ ಸರಿದ್ರು. ಬಾಂಬೆಗೆ 12 ಜನ ಹೋಗಿದ್ದರು. ಅಲ್ಲಿ ಏನೇನು ಮಾಡಿಕೊಂಡಿದ್ದಾರೋ ಗೊತ್ತಿಲ್ಲ ಅಂತ ಮಾಜಿ ಸಿಎಂ ಹೆಚ್​.ಡಿ. ಕುಮಾರಸ್ವಾಮಿ ಹೇಳಿದ್ದಾರೆ. ಇದರ ಇಂದೆ 2 ಜನರ ಒಂದು ಗುಂಪು, 3 ಜನರ ಮತ್ತೊಂದು ಗುಂಪು, 4 ಜನರ ಮಗದೊಂದು ಗುಂಪು ಇದೆ ಅಂತಿದ್ದಾರೆ. ವಿಶೇಷ ವಿಮಾನದಲ್ಲಿ ಬಾಂಬೆಗೆ ಕರೆದುಕೊಂಡು ಹೋಗಿದ್ದು ಇಬ್ಬರಾ, ಅಲ್ಲಿ ನೋಡಿಕೊಂಡಿದ್ದು ಮೂವರಾ, ಅಲ್ಲಿಂದ ವಾಪಸ್ ಕರ್ಕೊಂಡ್​ ಬಂದಿದ್ದು ನಾಲ್ವರಾ ಅನ್ನೋದನ್ನ ಬಾಲಚಂದ್ರ ಜಾರಕಿಹೊಳಿಯೇ ಹೇಳಬೇಕು. ನಾನು ಜೀವನದಲ್ಲಿ ಒಂದು ತಪ್ಪು ಮಾಡಿದ್ದೀನಿ ಅಂತ ವಿಧಾನಸಭೆಯಲ್ಲೇ ಹೇಳಿದ್ದೀನಿ. ತಪ್ಪು ಎಲ್ಲರೂ ಮಾಡ್ತಾರೆ. ಅದನ್ನ ತಿದ್ದಿಕೊಳ್ಳಬೇಕು. ನನ್ನ ಪ್ರಕಾರ ಮೈತ್ರಿ ಸರ್ಕರ ಬೀಳಿಸಿದವ್ರು ಅಮಾಯಕರು. ಇಂತಹ ಪರಿಸ್ಥಿತಿ ನಿರ್ಮಾಣ ಮಾಡಿಕೊಳ್ಳೋಕೆ ಸರ್ಕಾರ ಬೀಳಿಸಬೇಕಿತ್ತಾ? ಸರ್ಕಾರ ಬೀಳುವಾಗ ನಾನು ಅಮೆರಿಕದಲ್ಲಿದ್ದೆ. ಸರ್ಕಾರ ಬೀಳುತ್ತೆ ಅಂತ ಓಡಿ ಬಂದಿಲ್ಲ. 2009ರಲ್ಲೂ ಕೆಲವೊಂದಷ್ಟು ಜನ ಗೋವಾ ಸೇರಿದಂತೆ ಬೇರೆಬೇರೆ ಕಡೆ ಹೋಗಿದ್ದರು. ಆಗ್ಯಾಕೆ ಕೋರ್ಟ್​ಗೆ ಹೋಗಿ ಸ್ಟೇ ತಂದಿರಲಿಲ್ಲ. ಆಗ್ಯಾಕೆ ಇದೆಲ್ಲಾ ಆಗಿರಲಿಲ್ಲ? ಅಂತ ಹೆಚ್​.ಡಿ. ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.

-masthmagaa.com

Contact Us for Advertisement

Leave a Reply