ಶಿವಭಕ್ತರ ಮೇಲೆ ಹೂ ಮಳೆ, ನಮ್ಮ ಮನೆಗೆ ಬುಲ್ದೋಜರ್‌ ಎಂದು ಯೋಗಿ ವಿರುದ್ದ ಓವೈಸಿ ಕಿಡಿ!

masthmagaa.com:

ಕನ್ವರ್‌ ಯಾತ್ರಿಕರು ಅಂದ್ರೆ ಶಿವಭಕ್ತರ ಮೇಲೆ ಹೂಮಳೆ ಸುರಿಸುತ್ತೀರಿ. ಆದ್ರೆ ಮುಸ್ಲಿಂರ ಮನೆ ಮೇಲೆ ಬುಲ್ಡೋಜರ್‌ ಹತ್ತುಸ್ತೀರಿ ಅಂತ ಉತ್ತರ ಪ್ರದೇಶದ ಯೋಗಿ ಸರ್ಕಾರದ ವಿರುದ್ದ ಸಂಸದ ಅಸಾವುದ್ದೀನ್‌ ಓವೈಸಿ ಕಿಡಿಕಾರಿದ್ದಾರೆ. ಈ ಬಗ್ಗೆ ಮಾತನಾಡಿರೋ ಅವರು ಕನ್ವರ್‌ ಯಾತ್ರಿಕರಿಗೆ ಹೆಲಿಕಾಪ್ಟರ್‌ನಿಂದ ಪುಷ್ಪವೃಷ್ಟಿ ಮಾಡ್ತೀರಿ. ಇದಕ್ಕೆ ನಮ್ಮ ತೆರಿಗೆ ಹಣ ಬಳಸುತ್ತಿದ್ದೀರಿ. ತುಂಬಾ ಒಳ್ಳೇದು. ನಮ್ಮ ಮೇಲೂ ಸ್ವಲ್ಪ ಕರುಣೆ ತೋರಿ, ನಮ್ಮನ್ನೂ ಸಮಾನವಾಗಿ ಕಾಣಿ ಅಂತ ಹೇಳುತ್ತಿದ್ದೇವೆ. ಅವರ ಮೇಲೆ ಪುಷ್ಪವೃಷ್ಟಿ ಮಾಡುತ್ತೀರಿ. ಆದ್ರೆ ನಮ್ಮ ಮನೆಗಳನ್ನು ಮಾತ್ರ ಧ್ವಂಸ ಮಾಡಬೇಡಿ ಅಂತ ಮನವಿ ಮಾಡಿದ್ದಾರೆ.

-masthmagaa.com

Contact Us for Advertisement

Leave a Reply