ಕಂಗನಾಗೆ ಕೋರ್ಟ್​​ನಲ್ಲಿ ಹಿನ್ನಡೆ! ಯಾಕೆ ಗೊತ್ತಾ?

masthmagaa.com:

ನಟಿ ಕಂಗನಾ ರಾಣಾವತ್​​​ಗೆ ಬಾಂಬೆ ಹೈಕೋರ್ಟ್​​ನಲ್ಲಿ ಭಾರಿ ಹಿನ್ನಡೆಯಾಗಿದೆ. ರಾಜ್ಯಸಭೆ ಸಂಸದ, ಕವಿ ಮತ್ತು ಸಾಹಿತಿಯೂ ಆಗಿರೊ ಜಾವೇದ್ ಅಖ್ತರ್ ಕಂಗನಾ ಟಿವಿ ಶೋ ಒಂದ್ರಲ್ಲಿ ನನ್ನ ವಿರುದ್ಧ ಆಧಾರರಹಿತ ಆರೋಪ ಮಾಡಿದ್ದಾರೆ ಅಂತ ಮಾನನಷ್ಟ ಮೊಕದ್ದಮೆ ಹೂಡಿದ್ರು. ಈ ಸಂಬಂಧ ಕಂಗನಾ ಸೆಪ್ಟೆಂಬರ್ 1ರಂದು ಮೆಟ್ರೋಪಾಲಿಟನ್ ಕೋರ್ಟ್​​​ನಲ್ಲಿ ವಿಚಾರಣೆಗೆ ಹಾಜರಾಗಬೇಕಿತ್ತು. ಆದ್ರೆ ಕಂಗನಾ ಮಾನನಷ್ಟ ಮೊಕದ್ದಮೆ ಕೇಸ್ ರದ್ದುಪಡಿಸುವಂತೆ ಕೋರಿ ಅರ್ಜಿ ಸಲ್ಲಿಸಿದ್ರು. ಇದೀಗ ವಿಚಾರಣೆ ನಡೆಸಿರೋ ಬಾಂಬೆ ಹೈಕೋರ್ಟ್​​, ಅರ್ಜಿ ವಜಾಗೊಳಿಸಿದೆ. ಇದ್ರ ನಡುವೆ ಮೆಟ್ರೋ ಪಾಲಿಟನ್ ಕೋರ್ಟ್​ ಸೆಪ್ಟೆಂಬರ್ 13ರಂದು ಮಾನನಷ್ಟ ಮೊಕದ್ದಮೆ ಕೇಸ್ ವಿಚಾರಣೆ ನಡೆಸಲಿದೆ. ಒಂದ್ವೇಳೆ ಕೋರ್ಟ್​​ಗೆ ಹಾಜರಾಗದೇ ಇದ್ರೆ ವಾರೆಂಟ್ ಇಶ್ಯೂ ಮಾಡೋದಾಗಿ ಕೋರ್ಟ್ ಈಗಾಗಲೇ ಎಚ್ಚರಿಸಿದೆ.

-masthmagaa.com

Contact Us for Advertisement

Leave a Reply