masthmagaa.com:
ನಟಿ ಕಂಗನಾ ರಾಣಾವತ್ಗೆ ಬಾಂಬೆ ಹೈಕೋರ್ಟ್ನಲ್ಲಿ ಭಾರಿ ಹಿನ್ನಡೆಯಾಗಿದೆ. ರಾಜ್ಯಸಭೆ ಸಂಸದ, ಕವಿ ಮತ್ತು ಸಾಹಿತಿಯೂ ಆಗಿರೊ ಜಾವೇದ್ ಅಖ್ತರ್ ಕಂಗನಾ ಟಿವಿ ಶೋ ಒಂದ್ರಲ್ಲಿ ನನ್ನ ವಿರುದ್ಧ ಆಧಾರರಹಿತ ಆರೋಪ ಮಾಡಿದ್ದಾರೆ ಅಂತ ಮಾನನಷ್ಟ ಮೊಕದ್ದಮೆ ಹೂಡಿದ್ರು. ಈ ಸಂಬಂಧ ಕಂಗನಾ ಸೆಪ್ಟೆಂಬರ್ 1ರಂದು ಮೆಟ್ರೋಪಾಲಿಟನ್ ಕೋರ್ಟ್ನಲ್ಲಿ ವಿಚಾರಣೆಗೆ ಹಾಜರಾಗಬೇಕಿತ್ತು. ಆದ್ರೆ ಕಂಗನಾ ಮಾನನಷ್ಟ ಮೊಕದ್ದಮೆ ಕೇಸ್ ರದ್ದುಪಡಿಸುವಂತೆ ಕೋರಿ ಅರ್ಜಿ ಸಲ್ಲಿಸಿದ್ರು. ಇದೀಗ ವಿಚಾರಣೆ ನಡೆಸಿರೋ ಬಾಂಬೆ ಹೈಕೋರ್ಟ್, ಅರ್ಜಿ ವಜಾಗೊಳಿಸಿದೆ. ಇದ್ರ ನಡುವೆ ಮೆಟ್ರೋ ಪಾಲಿಟನ್ ಕೋರ್ಟ್ ಸೆಪ್ಟೆಂಬರ್ 13ರಂದು ಮಾನನಷ್ಟ ಮೊಕದ್ದಮೆ ಕೇಸ್ ವಿಚಾರಣೆ ನಡೆಸಲಿದೆ. ಒಂದ್ವೇಳೆ ಕೋರ್ಟ್ಗೆ ಹಾಜರಾಗದೇ ಇದ್ರೆ ವಾರೆಂಟ್ ಇಶ್ಯೂ ಮಾಡೋದಾಗಿ ಕೋರ್ಟ್ ಈಗಾಗಲೇ ಎಚ್ಚರಿಸಿದೆ.
-masthmagaa.com
Contact Us for Advertisement