masthmagaa.com:
ಮಾಜಿ ರಾಷ್ಟ್ರಪತಿ ಗ್ಯಾನಿ ಝೈಲ್ ಸಿಂಗ್ ಅವರ ಮೊಮ್ಮಗ ಇಂದರ್ಜೀತ್ ಸಿಂಗ್ ಇವತ್ತು ಬಿಜೆಪಿ ಸೇರ್ಪಡೆಗೊಂಡಿದ್ದಾರೆ. ದೆಹಲಿಯಲ್ಲಿ ಕೇಂದ್ರ ಸಚಿವ ಹರ್ದಿಪ್ ಸಿಂಗ್ ಪುರಿ ಅವರನ್ನ ಪಕ್ಷಕ್ಕೆ ಬರಮಾಡಿಕೊಂಡ್ರು. ಪಂಜಾಬ್ನಲ್ಲಿ ಮುಂದಿನ ವರ್ಷ ವಿಧಾನಸಭೆ ಚುನಾವಣೆ ನಡೆಯಲಿದೆ. ಇದರ ನಡುವೆಯೇ ಝೈಲ್ ಸಿಂಗ್ ಅವರ ಮೊಮ್ಮಗನನ್ನ ಬಿಜೆಪಿ ತನ್ನ ಬುಟ್ಟಿಗೆ ಹಕ್ಕೊಂಡಿದೆ. ಅಂದ್ಹಾಗೆ ಇಲ್ಲಿ ಗ್ಯಾನಿ ಝೈಲ್ ಸಿಂಗ್ ಬಗ್ಗೆ ಸ್ವಲ್ಪ ನೋಡ್ಬೇಕು. ಇವರು 1982ರಿಂದ 1987ರವರೆಗೆ ರಾಷ್ಟ್ರಪತಿಯಾಗಿದ್ರು. ರಾಷ್ಟ್ರಪತಿ ಆದ ಮೊದಲ ಸಿಖ್ ಸಮುದಾಯದ ವ್ಯಕ್ತಿ ಇವರಾಗಿದ್ದಾರೆ. ಇವರ ಅವಧಿಯಲ್ಲೇ ಆಪರೇಷನ್ ಬ್ಲೂ ಸ್ಟಾರ್ ನಡೀತು, ಇಂದಿರಾ ಗಾಂಧಿ ಅವರ ಹತ್ಯೆ ನಡೀತು, ಅದಾದ ಬಳಿಕ ಸಿಖ್ ವಿರೋಧಿ ದಂಗೆ ನಡೀತು. ಇಂದಿರಾ ಗಾಂಧಿಗೆ ತುಂಬಾ ಆಪ್ತರಾಗಿದ್ದ ಝೈಲ್ ಸಿಂಗ್ ಅವರು ಏನ್ ಹೇಳಿದ್ರೂ ಮಾಡೋಕು ರೆಡಿ ಇದ್ರು ಅಂತ ಹೇಳಲಾಗುತ್ತೆ. ಪಂಜಾಬ್ನ ಸ್ಥಿತಿಗತಿ ಬಗ್ಗೆ ಪ್ರಧಾನಿ ಇಂದಿರಾ ಗಾಂಧಿ ಪ್ರತಿವಾರ ಝೈಲ್ ಸಿಂಗ್ರಿಂದ ವರದಿ ತರಿಸಿಕೊಳ್ತಿದ್ರು. ಆಪರೇಷನ್ ಬ್ಲೂ ಸ್ಟಾರ್ಗೂ ಒಂದು ದಿನ ಇಂದಿರಾ ಗಾಂಧಿ ಮತ್ತು ಝೈಲ್ ಸಿಂಗ್ ಭೇಟಿ ನಡೆದಿತ್ತು. ಹೀಗಾಗಿ ಆಪರೇಷನ್ ನಡೆದ ಬಳಿಕ ಝೈಲ್ ಸಿಂಗ್ ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಡ್ಬೇಕು ಅನ್ನೋ ಕೂಗು ಸಿಖ್ ಸಮುದಾಯದಿಂದ ಕೇಳಿ ಬಂತು. ನಂತ್ರ ಇಂದಿರಾ ಗಾಂಧಿ ಹತ್ಯೆ ನಡೀತು. ಅದಾದ ಬಳಿಕ ದೇಶಾದ್ಯಂತ ಸಿಖ್ ವಿರೋಧಿ ದಂಗೆ ನಡೆದಾಗ ರಾಷ್ಟ್ರಪತಿ ಝೈಲ್ ಸಿಂಗ್ ಪ್ರಧಾನಿ ರಾಜೀವ್ ಗಾಂಧಿಗೆ ಕರೆ ಮಾಡಿ ಏನಾದ್ರೂ ಕ್ರಮ ಕೈಗೊಳ್ಳಿ. ಸಿಖ್ ವಿರೋಧಿ ದಂಗೆಯನ್ನ ನಿಲ್ಲಿಸಿ ಅಂತ ಪದೇಪದೆ ಮನವಿ ಮಾಡ್ತಿದ್ರಂತೆ. ಹೀಗಾಗಿ ರಾಜೀವ್ ಗಾಂಧಿ ಸರ್ಕಾರ ರಾಷ್ಟ್ರಪತಿ ಭವನದ ಟೆಲಿಫೋನ್ ಸಂಪರ್ಕ ಮತ್ತು ಕರೆಂಟ್ ಅನ್ನ ಕಟ್ ಮಾಡಿತ್ತು ಅಂತ ಆರೋಪ ಮಾಡಲಾಗುತ್ತೆ.
-masthmagaa.com
Contact Us for Advertisement