masthmagaa.com:
ಮಾಜಿ ಕ್ರಿಕೆಟಿಗ ಹಾಗೂ ಬಿಜೆಪಿ ನಾಯಕ ಗೌತಮ್ ಗಂಭೀರ್ ತಮ್ಮ ಅಲ್ಪಾವಧಿ ರಾಜಕೀಯ ಜೀವನಕ್ಕೆ ತೆರೆ ಎಳೆದಿದ್ದಾರೆ. ಹೀಗೊಂದು ಮಹತ್ವದ ನಿರ್ಧಾರ ತಗೊಂಡಿರೋ ಗಂಭೀರ್, ಸೋಷಿಯಲ್ ಮೀಡಿಯಾ ಪೋಸ್ಟ್ ಒಂದನ್ನ ಹಾಕಿ ರಾಜಕೀಯ ನಿವೃತ್ತಿ ವಿಚಾರವನ್ನ ಬಹಿರಂಗಪಡಿಸಿದ್ದಾರೆ. ಬಿಜೆಪಿ ರಾಜಕೀಯ ಅಧ್ಯಕ್ಷ ಜೆಪಿ ನಡ್ಡಾ ಬಳಿ ಈ ವಿಚಾರವಾಗಿ ಮಾತನಾಡಿದ್ದೇನೆ. ನನ್ನ ಮುಂದಿನ ಕ್ರಿಕೆಟ್ ಕಮಿಟ್ಮೆಂಟ್ಗಳ ಕಡೆ ಗಮನ ಕೊಡೋಕೆ, ನನ್ನ ರಾಜಕೀಯ ಜವಾಬ್ದಾರಿಗಳಿಂದ ಮುಕ್ತಿ ಕೊಡೋಕೆ ಕೇಳಿದ್ದೇನೆ. ಇಷ್ಟು ದಿನ ಜನರ ಸೇವೆ ಮಾಡೋ ಅವಕಾಶ ಕೊಟ್ಟ ಪ್ರಧಾನಿ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾರಿಗೆ ಧನ್ಯವಾದ ಹೇಳ್ತೇನೆ ಅಂದಿದ್ದಾರೆ.
-masthmagaa.com
Contact Us for Advertisement