ಪುನೀತ್ ಅಂತಿಮ ಮೆರವಣಿಗೆ ನಡೆಸಲಿಲ್ಲ ಯಾಕೆ..?

masthmagaa.com:

ಇನ್ನು ಇವತ್ತು ಬೆಳಗ್ಗೆ ಪಾರ್ಥಿವ ಶರೀರದ ಮೆರವಣಿಗೆ ನಡೆಯುತ್ತೆ ಅನ್ನೋ ನಿರೀಕ್ಷೆಯಲ್ಲಿ ಪುನೀತ್​ ಅಭಿಮಾನಿಗಳಿದ್ರು. ಮೆರವಣಿಗೆಯಲ್ಲಿ ಭಾಗವಹಿಸಿ ನೆಚ್ಚಿನ ನಟನಿಗೆ ಅಂತಿಮ ವಿದಾಯ ಹೇಳ್ಬೇಕು ಅಂದುಕೊಂಡಿದ್ರು. ಆದ್ರೆ ಮೆರವಣಿಗೆ ನಡೆಸಿರಲಿಲ್ಲ. ಈ ಬಗ್ಗೆ ಮಾತನಾಡಿದ ರಾಘವೇಂದ್ರ ರಾಜ್​ಕುಮಾರ್​, ಮೆರವಣಿಗೆ ನಡೆದ್ರೆ, ದೊಡ್ಡ ಸಂಖ್ಯೆಯಲ್ಲಿ ಅಭಿಮಾನಿಗಳು ಸೇರ್ತಾರೆ, ಅವರನ್ನ ಕಂಟ್ರೋಲ್ ಮಾಡೋಕೆ ಕಷ್ಟ ಆಗಬಹುದು. ಅಭಿಮಾನಿಗಳ ಜೀವಕ್ಕೆ, ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿಯಾಗಬಹುದು. ಅಭಿಮಾನಿಗಳ ಜೀವ, ಸಾರ್ವಜನಿಕ ಸ್ವತ್ತು ಎಲ್ಲವೂ ನಮ್ಮ ಜವಾಬ್ದಾರಿ. ನಾವು ಮೊದಲಿಗೆ ಪ್ರಜೆ, ಆಮೇಲೆ ಫ್ಯಾಮಿಲಿ. ಅಪ್ಪಾಜಿದು ಆದಾಗ ಹೆಂಗಾಗಿತ್ತು ಅಂತ ನೀವೆಲ್ಲಾ ನೋಡಿರಬಹುದು. ಹೀಗಾಗಿ ಯಾವುದೇ ಅನಾಹುತ ಆಗ್ಬಾರ್ದು, ಯಾರಿಗೂ ತೊಂದ್ರೆ ಆಗ್ಬಾರ್ದು. ಒಂದು ಆತ್ಮದ ಜೊತೆ ಇನ್ನೆರಡು ಆತ್ಮ ಹೋಗ್ಬಾರ್ದು. ಅಂತದ್ದಕ್ಕೆ ದಾರಿ ಮಾಡಿಕೊಡ್ಬಾರ್ದು ಅಂತ ಮೆರವಣಿಗೆ ನಡೆಸದೇ ಇರಲು ನಿರ್ಧರಿಸಿದ್ವಿ. ಕುಟುಂಬಸ್ಥರು, ಸರ್ಕಾರದವರು, ಎಲ್ಲರೂ ಸೇರ್ಕೊಂಡ್​ ಈ ನಿರ್ಧಾರ ತಗೊಂಡ್ವಿ ಅಂತ ರಾಘಣ್ಣ ಹೇಳಿದ್ರು.

-masthmagaa.com

Contact Us for Advertisement

Leave a Reply