masthmagaa.com:
ಈಶಾನ್ಯ ರಾಜ್ಯ ತ್ರಿಪುರಾದಲ್ಲಿ ಕೇಂದ್ರ ಸರ್ಕಾರ ಅಲ್ಲಿನ ರಾಜ್ಯ ಸರ್ಕಾರ ಹಾಗೂ ʻತ್ರಿಪʼ ಮೋತ ಪಕ್ಷದ ಮಧ್ಯೆ ತ್ರಿಪಕ್ಷೀಯ ಒಪ್ಪಂದ ಏರ್ಪಟ್ಟಿದೆ. ಈ ಅಗ್ರೀಮೆಂಟ್ನಲ್ಲಿ ತ್ರಿಪುರಾ ರಾಜ್ಯದ ಸ್ಥಳೀಯ ಜನರ ಸಮಸ್ಯೆಗಳನ್ನ ಬಗೆಹರಿಸೋ ಬಗ್ಗೆ ಕೆಲವು ನಿರ್ಧಾರಗಳನ್ನ ತೆಗೆದುಕೊಳ್ಳಲಾಗಿದೆ. ಇನ್ನು ಈ ಅಗ್ರೀಮೆಂಟ್ಗೆ ಸೈನ್ ಮಾಡಿದ ಗೃಹ ಸಚಿವ ಅಮಿತ್ ಶಾ, ʻಕೇಂದ್ರ ಸರ್ಕಾರ ಈ ಮೂಲಕ ತ್ರಿಪುರಾ ಇತಿಹಾಸವನ್ನ ಗೌರವಿಸಿ, ತನ್ನ ಹಳೆಯ ತಪ್ಪುಗಳನ್ನ ಸರಿ ಮಾಡ್ಕೊಂಡು, ಈಗಿನ ವಾಸ್ತವವನ್ನ ಒಪ್ಪಿಕೊಂಡು, ಉತ್ತಮ ಭವಿಷ್ಯದ ಕಡೆಗೆ ಹೊರಟಿದೆ. ತ್ರಿಪುರಾ ಜನರ ಹಕ್ಕುಗಳ ರಕ್ಷಣೆಗೆ ಎಲ್ಲಾ ಕ್ರಮವನ್ನ ಕೇಂದ್ರ ಸರ್ಕಾರ ತಗೊಳುತ್ತೆ ಅಂದಿದ್ದಾರೆ. ಅಲ್ಲದೆ ಉಗ್ರ ಸಂಘಟನೆ ನ್ಯಾಷನಲಿಸ್ಟ್ ಲಿಬರೇಷನ್ ಫ್ರಂಟ್ ಆಫ್ ತ್ರಿಪುರ ಜೊತೆ ಶಾಂತಿ ಒಪ್ಪಂದ ಮಾಡಿಕೊಳ್ಳಲಾಗಿದೆ. ಅಲ್ಲದೆ ಈ ಇಪ್ಪಂದ ಲೋಕ ಸಭಾ ಚುನಾವಣೆಗೆ ಮುನ್ನ ಕೇಂದ್ರ ಸರ್ಕಾರ ಈಶಾನ್ಯ ರಾಜ್ಯಗಳಲ್ಲಿ ಮಾಡ್ಕೊಳ್ತೊರೋ ಕೊನೇ ಒಪ್ಪಂಧ ಅಂದಿದ್ದಾರೆ.
-masthmagaa.com
Contact Us for Advertisement