masthmagaa.com:
ತಮಿಳುನಾಡು ರಾಜ್ಯಪಾಲರು ಸಭಾತ್ಯಾಗ ಮಾಡಿ ಹೊರನಡೆದಿದ್ದ ವಿಚಾರವಾಗಿ ಇದೀಗ ರಾಜಭವನ ಹೇಳಿಕೆ ಬಿಡುಗಡೆ ಮಾಡಿದೆ. ಇದ್ರಲ್ಲಿ ʻರಾಜ್ಯಪಾಲ RN ರವಿ ಅವ್ರನ್ನ ಗೋಡ್ಸೆ ಅನುಯಾಯಿ ಅಂತ ವಿಧಾನಸಭೆ ಸ್ಪೀಕರ್ ಎಂ ಅಪ್ಪಾವು ಟೀಕಿಸಿದ್ದಾರೆ. ಇದು ಸ್ಪೀಕರ್ ಸ್ಥಾನಕ್ಕೆ ಶೋಭೆ ತರಲ್ಲ. ಅಲ್ಲದೆ ರಾಷ್ಟ್ರಗೀತೆ ಹಾಡಬೇಕು ಅಂತ ಕೇಳಿಕೊಂಡ ರಾಜ್ಯಪಾಲರ ಮಾತಿಗೆ ಬೆಲೆ ಕೊಡಲಿಲ್ಲ. ಅವರ ಭಾಷಣದಲ್ಲಿ ನಗೆಪಾಟಲಿಗೀಡಾಗೋ ತಪ್ಪು ಸಂದೇಶಗಳಿದ್ದವುʼ ಅಂತ ರಾಜಭವನ ತಿಳಿಸಿದೆ. ಅಂದ್ಹಾಗೆ ಫೆಬ್ರುವರಿ 12 ರಂದು ರಾಜ್ಯಪಾಲರು ಭಾಷಣ ಮಾಡದೇ ಸದನದಿಂದ ಹೊರನಡೆದಿದ್ರು.
-masthmagaa.com
Contact Us for Advertisement