ನಾನು ಒಂದುಸಲ ಎಡವಿದ್ದೇನೆ, ಮತ್ಯಾಕೆ ಸುಧಾಕರ್ ನನ್ನ ಹೆಸರು ತೊಗೊಂಡ್ರು

masthmagaa.com:

ಸಿದ್ದರಾಮಯ್ಯ, ಹೆಚ್​.ಡಿ.ಕುಮಾರಸ್ವಾಮಿ, ಡಿ.ಕೆ. ಶಿವಕುಮಾರ್ ಏಕಪತ್ನಿ ವ್ರತಸ್ಥರಾ ಅಂತ ಪ್ರಶ್ನೆ ಮಾಡಿದ್ದ ಸಚಿವ ಡಾ.ಕೆ. ಸುಧಾಕರ್​ ಹೇಳಿಕೆಗೆ ಮಾಜಿ ಸಿಎಂ ಹೆಚ್​.ಡಿ. ಕುಮಾರಸ್ವಾಮಿ ಪ್ರತಿಕ್ರಿಯೆ ಕೊಟ್ಟಿದ್ದಾರೆ. ಏನ್ ಹೇಳಿದ್ದಾರೆ ಅಂದ್ರೆ, ‘ನಾನು ಒಂದುಸಲ ಎಡವಿದ್ದೇನೆ ಅಂತ ಸದನದಲ್ಲೇ ಹೇಳಿದ್ದೇನೆ. ಮತ್ಯಾಕೆ ನನ್ನ ಹೆಸರನ್ನ ಸುಧಾಕರ್ ತೊಗೊಂಡ್ರು ಗೊತ್ತಾಗ್ತಿಲ್ಲ. ನಾನು ಮಂತ್ರಿಗಳಿಗೆ ಹೇಳೋದು ಒಂದೇ.. ನೀವು ಕೋರ್ಟ್​ಗೆ ಹೋಗಿ ಸ್ಟೇ ತರದೇ ಇದ್ರೆ ಇದೆಲ್ಲಾ ಆಗ್ತಿತ್ತಾ. ಭೂಮಿ ಮೇಲೆ ಹುಟ್ಟೋ ಪ್ರತಿಯೊಂದು ಜೀವಿಗೂ ಕೆಲವೊಂದು ಸಹಜ ಪ್ರಕ್ರಿಯೆ ಅಂತ ಇರುತ್ತೆ. ಅದನ್ನ ಎಲ್ಲರೂ ಅರ್ಥ ಮಾಡಿಕೊಳ್ಳಬೇಕು. ಆ ವಿಚಾರದಲ್ಲಿ ರಾಡಿ ಯಾಕೆ ಎಳೆದುಕೊಳ್ಳುತ್ತಿದ್ದಾರೆ ಗೊತ್ತಿಲ್ಲ. ಇಲ್ಲಿರೋ ಎಲ್ಲರ ಮನೆ ದೋಸೆನೂ ತೂತು’ ಅಂತ ಹೆಚ್​.ಡಿ. ಕುಮಾರಸ್ವಾಮಿ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply