masthmagaa.com:
ಸಿದ್ದರಾಮಯ್ಯ, ಹೆಚ್.ಡಿ.ಕುಮಾರಸ್ವಾಮಿ, ಡಿ.ಕೆ. ಶಿವಕುಮಾರ್ ಏಕಪತ್ನಿ ವ್ರತಸ್ಥರಾ ಅಂತ ಪ್ರಶ್ನೆ ಮಾಡಿದ್ದ ಸಚಿವ ಡಾ.ಕೆ. ಸುಧಾಕರ್ ಹೇಳಿಕೆಗೆ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಪ್ರತಿಕ್ರಿಯೆ ಕೊಟ್ಟಿದ್ದಾರೆ. ಏನ್ ಹೇಳಿದ್ದಾರೆ ಅಂದ್ರೆ, ‘ನಾನು ಒಂದುಸಲ ಎಡವಿದ್ದೇನೆ ಅಂತ ಸದನದಲ್ಲೇ ಹೇಳಿದ್ದೇನೆ. ಮತ್ಯಾಕೆ ನನ್ನ ಹೆಸರನ್ನ ಸುಧಾಕರ್ ತೊಗೊಂಡ್ರು ಗೊತ್ತಾಗ್ತಿಲ್ಲ. ನಾನು ಮಂತ್ರಿಗಳಿಗೆ ಹೇಳೋದು ಒಂದೇ.. ನೀವು ಕೋರ್ಟ್ಗೆ ಹೋಗಿ ಸ್ಟೇ ತರದೇ ಇದ್ರೆ ಇದೆಲ್ಲಾ ಆಗ್ತಿತ್ತಾ. ಭೂಮಿ ಮೇಲೆ ಹುಟ್ಟೋ ಪ್ರತಿಯೊಂದು ಜೀವಿಗೂ ಕೆಲವೊಂದು ಸಹಜ ಪ್ರಕ್ರಿಯೆ ಅಂತ ಇರುತ್ತೆ. ಅದನ್ನ ಎಲ್ಲರೂ ಅರ್ಥ ಮಾಡಿಕೊಳ್ಳಬೇಕು. ಆ ವಿಚಾರದಲ್ಲಿ ರಾಡಿ ಯಾಕೆ ಎಳೆದುಕೊಳ್ಳುತ್ತಿದ್ದಾರೆ ಗೊತ್ತಿಲ್ಲ. ಇಲ್ಲಿರೋ ಎಲ್ಲರ ಮನೆ ದೋಸೆನೂ ತೂತು’ ಅಂತ ಹೆಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.
-masthmagaa.com
Contact Us for Advertisement