masthmagaa.com:
ಭಾರತ ಕ್ರಿಕೆಟ್ ತಂಡದ ಕ್ರೂಷಿಯಲ್ ಆಲ್-ರೌಂಡರ್ ಉಪನಾಯಕ ಹಾರ್ದಿಕ್ ಪಾಂಡ್ಯ ಗಾಯದ ಹಿನ್ನೆಲೆಯಲ್ಲಿ ಬರುವ ಇಂಗ್ಲೆಂಡ್, ಶ್ರೀಲಂಕಾ ವಿರುದ್ಧದ ವಿಶ್ವಕಪ್ ಪಂದ್ಯಗಳಲ್ಲಿ ಆಡೋದು ಡೌಟ್ ಎನ್ನಲಾಗ್ತಿದೆ. ಬಾಂಗ್ಲಾ ವಿರುದ್ಧದ ಪಂದ್ಯದಲ್ಲಿ ಫೀಲ್ಡಿಂಗ್ ವೇಳೆ ಎಡಗಾಲಿನ ಪಾದದ ಇಂಜುರಿಗೆ ಒಳಗಾದ ಪಾಂಡ್ಯ ಸದ್ಯ ಬೆಂಗಳೂರಿನ ನ್ಯಾಷನಲ್ ಕ್ರಿಕೆಟ್ ಅಕಾಡೆಮಿಯಲ್ಲಿ ಟ್ರೀಟ್ಮೆಂಟ್, ವಿಶ್ರಾಂತಿ ಪಡೆಯುತ್ತಿದ್ದಾರೆ. ಲಕ್ನೋದಲ್ಲಿ ಅಕ್ಟೋಬರ್ 29ರಂದು ನಡೆಯಲಿರುವ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಪಾಂಡ್ಯ ಕಣಕ್ಕಿಳಿಯಲಿದ್ದಾರೆ ಅಂತ ಹೇಳಲಾಗ್ತಿತ್ತು. ಆದ್ರೆ ವೈದ್ಯರ ಸಲಹೆ ಮೇರೆಗೆ ಇನ್ನೂ ಸ್ವಲ್ಪ ಸಮಯ ವಿಶ್ರಾಂತಿಯಲ್ಲಿ ಇರಲಿದ್ದಾರೆ ಅಂತ ಗೊತ್ತಾಗಿದೆ. ಬೌಲಿಂಗ್ನಲ್ಲಿ ಆಡೋಕೆ ಕಷ್ಟವಾದ ಬೌನ್ಸರ್ಗಳು, ವೇರಿಯೇಶನ್ ಮಾಡೋದ್ರಲ್ಲಿ ಹಾಗೂ ಬ್ಯಾಟಿಂಗ್ ವೇಳೆ ಈಸಿಯಾಗಿ ಬೌಂಡರಿಗಳನ್ನ ಹೊಡೆಯ ಎಬಿಲಿಟಿ ಇರೋ ಹಾರ್ದಿಕ್ ಪಾಂಡ್ಯ ತಂಡದಲ್ಲಿ ತುಂಬಾ ಇಂಪಾರ್ಟೆಂಟ್ ಆಟಗಾರ ಆಗಿದ್ದಾರೆ. ಈಗ ಓಕೆ. ಆದ್ರೆ ಸೆಮಿ-ಫೈನಲ್, ಫೈನಲ್ಗಳಿಗೆ ಭಾರತ ತಲುಪಿದ್ರೆ ಪಾಂಡ್ಯ ಅವಶ್ಯಕತೆ ತಂಡಕ್ಕೆ ಇದೆ ಅಂತ ಅನ್ನಿಸುತ್ತೆ.
-masthmagaa.com
Contact Us for Advertisement