ಅಂಬಾರಿ ಹೊತ್ತ ಅರ್ಜುನನ ಅಗಲಿಕೆ! ಏನಾಯ್ತು….?

masthmagaa.com:

ಕಾಡಾನೆ ಜೊತೆಗಿನ ಭೀಕರ ಕಾಳಗದಲ್ಲಿ, ಸಾಕಷ್ಟು ಬಾರಿ ದಸರಾ ಅಂಬಾರಿ ಹೊತ್ತಿದ್ದ ʻಅರ್ಜುನʼ ಸಾಕಾನೆ ಮೃತಪಟ್ಟಿದೆ. ಹಾಸನ ಜಿಲ್ಲೆಯ ಹಲವಾರು ಕಡೆ ಕಾಡಾನೆ ದಾಳಿ ಜಾಸ್ತಿಯಾಗ್ತಿರೋದ್ರಿಂದ, ಇದೀಗ ಅವುಗಳ ಸೆರೆ ಹಿಡಿಯೋ ಕಾರ್ಯಾಚರಣೆ ನಡೆಸಲಾಗ್ತಿದೆ. ಈ ವೇಳೆ ಸಾಕಾನೆಗಳು ಹಾಗೂ ಕಾಡಾನೆ ನಡುವೆ ದೊಡ್ಡ ಫೈಟ್‌ ಶುರುವಾಗಿದೆ. ಅರ್ಜುನ ಆನೆ ಜೊತೆಗಿದ್ದ ಮೂರು ಸಾಕಾನೆಗಳು ಒಂಟಿ ಸಲಗದ ದಾಳಿ ಕಂಡು ಹಿಂದು-ಮುಂದು ನೋಡ್ದೇ ಓಡಿ ಹೋಗಿವೆ. ಜೊತೆಗೆ ಅರ್ಜುನ ಮೇಲಿದ್ದ ಮಾವುತರು ಕೂಡ ಇಳಿದು ಓಡಿ ಹೋಗಿದ್ದಾರೆ. ನಂತರ ಸಾಕಾನೆ ಅರ್ಜುನ ಹಾಗೂ ಕಾಡಾನೆ ಮಧ್ಯೆ ನಡೆದ ಭೀಕರ ಫೈಟ್‌ನಲ್ಲಿ, ಅರ್ಜುನ ಬಾರದ ಲೋಕಕ್ಕೆ ತೆರಳಿದ್ದಾನೆ. ಅರಣ್ಯ ಇಲಾಖೆ ಅಧಿಕಾರಿಗಳು ಘಟನಾ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಅಂದ್ಹಾಗೆ ಬರೋಬ್ಬರಿ 22 ವರ್ಷಗಳ ಕಾಲ ದಸರಾ ಮೆರವಣಿಗೆಯಲ್ಲಿ ಭಾಗವಹಿಸಿದ್ದ ಅರ್ಜುನ 8 ಬಾರಿ ಅಂಬಾರಿ ಹೊತ್ತಿದ್ದ.

-masthmagaa.com

Contact Us for Advertisement

Leave a Reply