ರಾಜಸ್ಥಾನ: ಮುನಿಸು ಬಿಟ್ಟು ಒಂದಾದ ಕಾಂಗ್ರೆಸ್‌ ನಾಯಕರು

masthmagaa.com:

ರಾಜಸ್ಥಾನ ಕಾಂಗ್ರೆಸ್‌ ಘಟಕದಲ್ಲಿನ ನಾಯಕತ್ವ ಕಿತ್ತಾಟದ ನಡುವೆಯೇ, ಸಿಎಂ ಅಶೋಕ್‌ ಗೆಹ್ಲೋಟ್‌ ಹಾಗೂ ಮಾಜಿ ಡಿಸಿಎಂ ಸಚಿನ್‌ ಪೈಲಟ್‌ ಅವ್ರು ಒಗ್ಗಾಟ್ಟಾಗಿ ಮುಂಬರುವ ವಿಧಾನಸಭಾ ಚುನಾವಣೆ ಎದುರಿಸಲು ಒಪ್ಪಿಕೊಂಡಿದ್ದಾರೆ ಅಂತ ಹೇಳಲಾಗಿದೆ. ಪಕ್ಷದೊಳಗಿನ ಎಲ್ಲಾ ಸಮಸ್ಯೆಗಳನ್ನ ಬಗೆಹರಿಸೋದು ಹೈಕಮಾಂಡ್‌ ವಿವೇಚನೆಗೆ ಬಿಡಲಾಗಿದ್ದು, ಇದಕ್ಕೆ ಇಬ್ಬರು ನಾಯಕರು ಒಪ್ಪಿದ್ದಾರೆ ಎನ್ನಲಾಗಿದೆ. ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ನಾಯಕ ರಾಹುಲ್‌ ಗಾಂಧಿ ಜೊತೆಗಿನ ಸುದೀರ್ಘ ಚರ್ಚೆ ನಂತರ ಎಲ್ಲರೂ ಒಟ್ಟಾಗಿ ಎಲೆಕ್ಶನ್‌ ಫೇಸ್‌ ಮಾಡೋಕೆ ಒಪ್ಪಿದ್ದಾರೆ ಅಂತ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಕೆ.ಸಿ ವೇಣುಗೋಪಾಲ್‌ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply