ಹಿಜಬ್ ತೀರ್ಪು ಕೊಟ್ಟ ಜಡ್ಜ್​​ಗೆ ಜೀವ ಬೆದರಿಕೆ! ವೈ ಸೆಕ್ಯೂರಿಟಿ

masthmagaa.com:

ಹಿಜಾಬ್‌ ವಿವಾದ ಸಂಬಂಧ ತೀರ್ಪು ನೀಡಿದ ಹೈಕೋರ್ಟ್​ ಸಿಜೆ ರಿತು ರಾಜ್ ಅಸ್ವತಿ ಸೇರಿದಂತೆ ಮೂವರು ಜಡ್ಜ್​ಗಳಿಗೆ ಬೆದರಿಕೆಗಳು ಹೆಚ್ಚಾಗ್ತಿವೆ. ಲಾಯರ್ ಉಮಾಪತಿ ಅನ್ನೋರು ತಮ್ಮ ಮೊಬೈಲ್​​ಗೆ ವಿಡಿಯೋ ಸಂದೇಶಗಳು ಬಂದಿದ್ದು ಅದ್ರಲ್ಲಿ ಸಿಜೆ ರಿತುರಾಜ್ ಅಸ್ವತಿ ಅವರಿಗೆ ಜೀವ ಬೆದರಿಕೆ ಒಡ್ಡಲಾಗಿದೆ ಅಂತ ದೂರಿದ್ದಾರೆ. ಅದ್ರ ಆಧಾರದ ಮೇಲೆ ಎಫ್​ಐಆರ್ ದಾಖಲಿಸಲಾಗಿದೆ. ಇದ್ರ ಬೆನ್ನಲ್ಲೇ ಪ್ರತಿಕ್ರಿಯಿಸಿರೋ ಸಿಎಂ ಬಸವರಾಜ್ ಬೊಮ್ಮಾಯಿ, ಮೂರು ಜಡ್ಜ್‌ಗಳಿಗೆ ವೈ ಕೆಟಗರಿಯ ರಕ್ಷಣೆ ಕೊಡ್ತೀವಿ ಅಂತ ಹೇಳಿದ್ದಾರೆ. ನಿನ್ನೆಯಷ್ಟೇ ತಮಿಳುನಾಡಿನಲ್ಲಿ ಜಡ್ಜ್​ಗಳಿಗೆ ಬೆದರಿಕೆ ಹಾಕಿದ ಮೂವರನ್ನು ಅರೆಸ್ಟ್ ಮಾಡಲಾಗಿತ್ತು.

-masthmagaa.com

Contact Us for Advertisement

Leave a Reply