masthmagaa.com:
ಹಿಜಾಬ್ ವಿವಾದ ಸಂಬಂಧ ತೀರ್ಪು ನೀಡಿದ ಹೈಕೋರ್ಟ್ ಸಿಜೆ ರಿತು ರಾಜ್ ಅಸ್ವತಿ ಸೇರಿದಂತೆ ಮೂವರು ಜಡ್ಜ್ಗಳಿಗೆ ಬೆದರಿಕೆಗಳು ಹೆಚ್ಚಾಗ್ತಿವೆ. ಲಾಯರ್ ಉಮಾಪತಿ ಅನ್ನೋರು ತಮ್ಮ ಮೊಬೈಲ್ಗೆ ವಿಡಿಯೋ ಸಂದೇಶಗಳು ಬಂದಿದ್ದು ಅದ್ರಲ್ಲಿ ಸಿಜೆ ರಿತುರಾಜ್ ಅಸ್ವತಿ ಅವರಿಗೆ ಜೀವ ಬೆದರಿಕೆ ಒಡ್ಡಲಾಗಿದೆ ಅಂತ ದೂರಿದ್ದಾರೆ. ಅದ್ರ ಆಧಾರದ ಮೇಲೆ ಎಫ್ಐಆರ್ ದಾಖಲಿಸಲಾಗಿದೆ. ಇದ್ರ ಬೆನ್ನಲ್ಲೇ ಪ್ರತಿಕ್ರಿಯಿಸಿರೋ ಸಿಎಂ ಬಸವರಾಜ್ ಬೊಮ್ಮಾಯಿ, ಮೂರು ಜಡ್ಜ್ಗಳಿಗೆ ವೈ ಕೆಟಗರಿಯ ರಕ್ಷಣೆ ಕೊಡ್ತೀವಿ ಅಂತ ಹೇಳಿದ್ದಾರೆ. ನಿನ್ನೆಯಷ್ಟೇ ತಮಿಳುನಾಡಿನಲ್ಲಿ ಜಡ್ಜ್ಗಳಿಗೆ ಬೆದರಿಕೆ ಹಾಕಿದ ಮೂವರನ್ನು ಅರೆಸ್ಟ್ ಮಾಡಲಾಗಿತ್ತು.
-masthmagaa.com
Contact Us for Advertisement