ಒಡಿಶಾ ರೈಲು ದುರಂತಕ್ಕೆ ಕಂಬನಿ ಮಿಡಿದ ವಿಶ್ವನಾಯಕರು!

masthmagaa.com:

ಒಡಿಶಾದ ಬಾಲಸೋರ್‌ ಬಳಿ ನಡೆದ ತ್ರಿವಳಿ ರೈಲು ಅಪಘಾತದಲ್ಲಿ ಮೃತಪಟ್ಟವರ ಕುಟುಂಬಕ್ಕೆ ಅಮೆರಿಕ ಅಧ್ಯಕ್ಷ ಜೋ ಬೈಡನ್‌ ಅವ್ರು ಸಂತಾಪ ಸೂಚಿಸಿದ್ದಾರೆ. ನಾನು ಹಾಗೂ ಜಿಲ್‌ ಬೈಡನ್‌ ದುರಂತದ ಬಗ್ಗೆ ತಿಳಿದು ಅಘಾತಗೊಂಡಿದ್ದೇವೆ. ಘಟನೆಯಲ್ಲಿ ತಮ್ಮ ಪ್ರೀತಿಪಾತ್ರರನ್ನ ಕಳೆದುಕೊಂಡವರಿಗೆ ಹಾಗೂ ಗಾಯಗೊಂಡವರಿಗಾಗಿ ನಾವು ಪ್ರಾರ್ಥಿಸುತ್ತೇವೆ ಅಂತ ಬೈಡನ್‌ ತಿಳಿಸಿದ್ದಾರೆ. ಜೊತೆಗೆ ಅಮೆರಿಕ ಹಾಗೂ ಭಾರತ ಹಲವು ವಿಷಯಗಳಲ್ಲಿ ಆಳವಾದ ಸಂಬಂಧವನ್ನ ಹೊಂದಿವೆ. ಈ ದುರಂತಕ್ಕೆ ಅಮೆರಿಕದಾದ್ಯಂತ ಜನರು ಭಾರತದ ಜನರೊಂದಿಗೆ ದುಃಖವನ್ನ ಹಂಚಿಕೊಳ್ಳುತ್ತಾರೆ ಅಂತ ತಿಳಿಸಿದ್ದಾರೆ. ಇತ್ತ ಬ್ರಿಟನ್‌ ಪ್ರಧಾನಿ ರಿಷಿ ಸುನಾಕ್‌, ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌, ಚೀನಾ ಅಧ್ಯಕ್ಷ ಷಿ ಜಿನ್‌ ಪಿಂಗ್‌, ಫ್ರಾನ್ಸ್‌ ಅಧ್ಯಕ್ಷ ಇಮ್ಯಾನುಯೆಲ್‌ ಮ್ಯಾಕ್ರಾನ್‌, ಪಾಕಿಸ್ತಾನ ವಿದೇಶಾಂಗ ಸಚಿವ ಬಿಲಾವಲ್‌ ಭುಟ್ಟೊ ಹಾಗೂ ತಾಲಿಬಾನ್‌ ವಿದೇಶಾಂಗ ಸಚಿವಾಲಯ ಸೇರಿದಂತೆ ವಿಶ್ವದ ಹಲವು ನಾಯಕರು ಸಂತಾಪ ಸೂಚಿಸಿದ್ದಾರೆ. ಇನ್ನೊಂದ್‌ ಕಡೆ ಘಟನೆಗೆ ಪೋಪ್‌ ಫ್ರಾನ್ಸಿಸ್‌ ಸಂತಾಪ ಸೂಚಿಸಿದ್ದಾರೆ. ಈ ದುರಂತದಲ್ಲಿ ಹಲವರು ಗಂಭೀರ ಗಾಯಗೊಂಡಿದ್ದು, ಹೆಚ್ಚು ಜೀವಹಾನಿಗೆ ಕಾರಣವಾಗಿರುವ ಅಪಘಾತದಿಂದ ಅತೀವ ನೋವಾಗಿದೆ ಅಂತ ಹೇಳಿದ್ದಾರೆ. ಜೊತೆಗೆ ಘಟನೆಯಲ್ಲಿ ಮಡಿದವರಿಗಾಗಿ ಪ್ರಾರ್ಥನೆ ಸಲ್ಲಿಸಿರೋದಾಗಿ ಪೋಪ್‌ ತಿಳಿಸಿದ್ದಾರೆ.

-masthmagaa.com

Contact Us for Advertisement

Leave a Reply