masthmagaa.com:
ಬಾಲಿವುಡ್ ನಿರ್ಮಾಪಕ ಕರಣ್ ಜೋಹರ್ ಸಮಯಪ್ರಜ್ಞೆಯ ಬಗ್ಗೆ ಯಾರೋ ಒಬ್ಬರಿಗೆ ಪಾಠ ಮಾಡಿದ್ದಾರೆ. ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಶೇರ್ ಮಾಡಿದ ಕರಣ್ ಜೋಹರ್ ಸಮಯಕ್ಕೆ ಸರಿಯಾಗಿ ಬರದೇ ಇರುವವರನ್ನ “ಸಮಯಾಪರಾಧಿಗಳು” ಅಂತ ಕರೆದಿದ್ದಾರೆ. ಯಾರ ಹೆಸರನ್ನೂ ಸಹ ಮೆನ್ಷನ್ ಮಾಡದೇ ಸಮಯ ಪ್ರಜ್ಞೆ ಅನ್ನೋದು ಮೂಲಭೂತ ನಡವಳಿಕೆ ಅಂತ ಹೇಳಿದ್ದಾರೆ.
ಇನ್ನು ತಮ್ಮ ಅಕೌಂಟ್ನಲ್ಲಿ ಸಾಲು ಸಾಲು ಲೈನ್ಗಳನ್ನ ಬರೆದಿದ್ದಾರೆ.
“ಸಮಯ ಪಾಲನೆ ಮಾಡೋರಿಗೆ ಪ್ರತಿಭೆ ಇರಬೇಕು, ಕೆಲಸ ಇರಬೇಕು ಅಂತೆಲ್ಲಾ ಯಾವುದೇ ಅಡಚಣೆ ಇರೋದಿಲ್ಲ. ಇದೊಂದು ನ್ಯಾಚುರಲ್ ಟ್ಯಾಲೆಂಟ್. ಇದು ನಮ್ಮ ಹಿರಿಯರು ಅಥ್ವಾ ಪೀಳಿಗೆಯಿಂದ ಪಡೆಯುವ ಗುಣ ಅಲ್ಲ. ಇದೊಂದು ಮೂಲಭೂತ ನಡವಳಿಕೆ ಅಷ್ಟೇ. ಇತರರ ಸಮಯಕ್ಕೆ ಗೌರವ ಕೊಡೋದು, ನಮ್ಮ ಆದ್ಯ ಕರ್ತವ್ಯ ಆಗಿರ್ಬೇಕು. 15 ನಿಮಿಷ ಲೇಟ್ ಆಗಿ ಬಂದು ಕ್ಷಮಾಪಣೆಯನ್ನೂ ಕೇಳದೇ ಅಥವಾ ಏನೂ ತಪ್ಪಿಲ್ಲದಂತೆ ನಡೆದುಕೊಳ್ಳೋದು ಸರಿ ಅಲ್ಲ. ಬರ್ತಾ ಇದೀನಿ ಅಂತ ಒಂದು ಮೆಸೆಜ್ ಮಾಡೋದ್ರಿಂದ ನಿಮಗೇನಾದ್ರೂ ಸಮಸ್ಯೆ ಆಗತ್ತಾ? ಮೆಸೆಜ್ ಕಳ್ಸೋದ್ರಿಂದ ನೀವು ನನಗೆ ಹೆಲ್ಪ್ ಮಾಡ್ತಾ ಇದೀರಿ ಅಂತ ಅಂದ್ಕೋಳ್ಬೇಡಿ. ಮೆಸೆಜ್ ಕಳ್ಸೋಕೆ ಮರೆತು ಹೋಯ್ತು ಅನ್ನೋ ಉತ್ತರ ಕೊಡೋಕೆ ನೀವೇನಾದ್ರೂ ಮಿನಿಸ್ಟರ್ ಆಗಿದ್ರಾ ? ನಂತರ ಫುಲ್ ಟ್ರಾಫಿಕ್ ಅಂತ ಉತ್ತರ ಕೊಡ್ತೀರಾ, ನಾವು ನ್ಯೂಜಿಲ್ಯಾಂಡ್ನಲ್ಲಿ ಬದುಕ್ತಾ ಇಲ್ಲ. ಇಂಡಿಯಾದಲ್ಲಿ ಇದೀವಿ. ಟ್ರಾಫಿಕ್ ಇರತ್ತೆ ಅಂತ ನಿಮಗೆ ಗೊತ್ತಿರತ್ತೆ, ಹಾಗಿದ್ದಾಗ 15 ನಿಮಿಷ ಮೊದಲೇ ಹೊರಡಿ. ಬೇಗ ಹೊರಡದೇ ಇರೋದು, ಲೇಟ್ ಆದ್ರೂ ಸಹ ಒಂದ್ ಮೆಸೆಜ್ ಮಾಡದೇ ಇರೋದು, ಇದೆಲ್ಲಾ ತುಂಬಾ ಕೆಟ್ಟ ಗುಣಗಳು.” ಅಂತ ಬರೆದಿದ್ದಾರೆ.
ಇನ್ನು ಇವರ ಈ ಪೋಸ್ಟ್ಗೆ ಅಭಿಮಾನಿಗಳು ಸಾಲು ಸಾಲು ಕಾಮೆಂಟ್ ಮಾಡ್ತಾ ಇದಾರೆ. “ನಿಮ್ಮ ಮಾತನ್ನ ನಾನು ಒಪ್ತೀನಿ, ಆದರೆ ಆ ವ್ಯಕ್ತಿ ಯಾರು ಹೇಳಿ ” ಅಂತ ಕಾಮೆಂಟ್ ಮಾಡಿದ್ರೆ, ಇನ್ನೊಬ್ಬ ” ಯಾರು ಅಂತ ನಾವು ಕಾಫಿ ವಿತ್ ಕರಣ್ ಪ್ರೋಗ್ರಾಮ್ ನೋಡಿ ಕಂಡ್ ಹಿಡಿತೀವಿ” ಅಂತ ಕಾಮೆಂಟ್ ಮಾಡಿದ್ದಾರೆ.
-masthmagaa.com
Contact Us for Advertisement