MLC ಸ್ಥಾನಕ್ಕೆ ರಾಜೀನಾಮೆ, ರಾಜೀನಾಮೆ ಬಿಟ್ಟ ತೇಜಸ್ವಿನಿ ಗೌಡ!

masthmagaa.com:

ಮಂಡ್ಯ ಲೋಕಸಭಾ ಕ್ಷೇತ್ರದಿಂದ ಈ ಬಾರಿ ಬಿಜೆಪಿ-ಜೆಡಿಎಸ್‌ ಮೈತ್ರಿ ಅಭ್ಯರ್ಥಿಯಾಗಿ ಮಾಜಿ ಸಿಎಂ HD ಕುಮಾರಸ್ವಾಮಿ ಸ್ಪರ್ಧೆ ಮಾಡಲಿದ್ದಾರೆ ಅಂತ ಮಾಜಿ ಪ್ರಧಾನಿ HD ದೇವೇಗೌಡ ಸ್ಪಷ್ಟಪಡಿಸಿದ್ದಾರೆ. ಇನ್ನು ಕೋಲಾರದಿಂದ ಮಲ್ಲೇಶ್‌ಬಾಬು ಹಾಗೂ ಹಾಸನದಿಂದ ಹಾಲಿ ಸಂಸದ ಪ್ರಜ್ವಲ್‌ ರೇವಣ್ಣ ಜೆಡಿಎಸ್‌ನಿಂದ ಕಣಕ್ಕಿಳಿಯಲಿದ್ದಾರೆ ಅಂತ ದೇವೇಗೌಡರು ತಿಳಿಸಿದ್ದಾರೆ. ‌ಆದ್ರೆ ಕುಮಾರಸ್ವಾಮಿ ಮಾತ್ರ ಕೋಲಾರದಲ್ಲಿ ಮಲ್ಲೇಶ್‌ ಬಾಬು ಅವ್ರ ಹೆಸರು ಅಂತಿಮವಾಗಿಲ್ಲ, ದೇವೇಗೌಡರು ತಮ್ಮ ಭಾವನೆ ತಿಳಿಸಿದ್ದಾರೆ ಅಷ್ಟೇ ಅಂತೇಳಿ ಕೋಲಾರದ ಸೀಟನ್ನ ಇನ್ನು ಸಸ್ಪೆನ್ಸ್‌ ಆಗಿಡೋ ಪ್ರಯತ್ನ ಮಾಡಿದ್ದಾರೆ. ಇನ್ನು ಬಿಜೆಪಿಯ ವಿಧಾನ ಪರಿಷತ್‌ ಸದಸ್ಯೆ ತೇಜಸ್ವಿನಿ ಗೌಡ ತಮ್ಮ MLC ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಅಲ್ಲದೆ ಸ್ವಇಚ್ಛೆಯಿಂದ ಈ ನೀಡಿದ್ದು, ಗುರುವಾರ ಕಾಂಗ್ರೆಸ್‌ ಪಕ್ಷ ಸೇರೋದಾಗಿ ತೇಜಸ್ವಿನಿ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply