masthmagaa.com:
ಮುಂದಿನ ತಿಂಗಳ ಜುಲೈ 18ನೇ ತಾರೀಖಿನಂದು ದೇಶದ ರಾಷ್ಟ್ರಪತಿ ಸ್ಥಾನಕ್ಕೆ ಚುನಾವಣೆ ನಡೆಯಲಿದ್ದು ಇಂದು NDA ಅಭ್ಯರ್ಥಿ ದ್ರೌಪದಿ ಮುರ್ಮ ನಾಮಪತ್ರ ಸಲ್ಲಿಸಿದ್ದಾರೆ. ಅವರಿಗೆ ಪ್ರಧಾನಿ ಮೋದಿ, ಅಮಿತ್ ಶಾ, ನಿತಿನ್ ಗಡ್ಕರಿ, ರಾಜನಾಥ್ ಸಿಂಗ್, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಸೇರಿದಂತೆ ಹಲವು ನಾಯಕರು ಸಾಥ್ ನೀಡಿದ್ದಾರೆ. ಇದೇ ವೇಳೆ ಬಿಜೆಪಿ ಆಡಳಿತವಿರೋ ಮುಖ್ಯಮಂತ್ರಿಗಳು ಹಾಗೂ ವೈಎಸ್ಆರ್ ಕಾಂಗ್ರೆಸ್ ಹಾಗೂ ಬಿಜು ಜನತಾದಳ ಮುಖಂಡರು ಕೂಡ ಭಾಗವಹಿಸಿದ್ರು. ನಾಮಮತ್ರ ಸಲ್ಲಿಸಿದ ಬಳಿಕ ರಾಷ್ಟ್ರಪತಿ ಅಭ್ಯರ್ಥಿ ಮುರ್ಮು, ಪ್ರತಿಪಕ್ಷಗಳ ನಾಯಕರಾದ TMCಯ ಮಮತಾ ಬ್ಯಾನರ್ಜಿ,ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ NCPಯ ಶರಾದ್ ಪವಾರ್ ಸೇರಿದಂತೆ ಕರೆ ಮಾಡಿ ಬೆಂಬಲಿಸುವಂತೆ ಮನವಿ ಮಾಡಿದ್ದಾರೆ. ಈ ವೇಳೆ ಅವರೂ ಕೂಡ ಬಿಜೆಪಿ ಅಭ್ಯರ್ಥಿ ಮುರ್ಮುರಿಗೆ ಶುಭಕೋರಿದ್ದಾರೆ ಅಂತ ವರದಿಯಾಗಿದೆ. ಇತ್ತ ಮುರ್ಮುವರಿಗೆ Z+ ನೀಡಲಾಗಿದ್ದು ಇದರ ಬೆನ್ನಲ್ಲೇ ಪ್ರತಿಪಕ್ಷದ ಅಭ್ಯರ್ಥಿ 84 ವರ್ಷದ ಯಶವಂತ್ ಸಿನ್ಹಾರಿಗೂ ʻಝಡ್ʼ ಕೆಟಗರಿ ಸೆಕ್ಯೂರಿಟಿ ನೀಡಲಾಗಿದೆ ಅಂತ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
-masthmagaa.com
Contact Us for Advertisement