ನನಗೆ ಸಚಿವ ಸ್ಥಾನ ಬೇಡ: ಕೆ ಎಸ್‌ ಈಶ್ವರಪ್ಪ

masthmagaa.com:

ನನಗೆ ಸಚಿವ ಸ್ಥಾನ ಬೇಡ, ಇನ್ನು ನನ್ನನ್ನ ಮಂತ್ರಿ ಮಾಡುವ ಅವಶ್ಯಕತೆಯೂ ಇಲ್ಲ ಅಂತ ಮಾಜಿ ಸಚಿವ ಕೆ ಎಸ್‌ ಈಶ್ವರಪ್ಪ ಹೇಳಿದ್ದಾರೆ. ಸಂತೋಷ್‌ ಪಾಟೀಲ್‌ ಆತ್ಮಹತ್ಯೆ ಕೇಸ್‌ನಲ್ಲಿ ನನಗೆ ಕ್ಲೀನ್‌ ಚಿಟ್‌ ಸಿಕ್ಕಿದೆ. ಬಳಿಕ ಸಿಎಂ ಮಂತ್ರಿ ಮಾಡ್ತೀನಿ ಅಂತ ಭರವಸೆ ನೀಡಿದ್ರು. ಆದ್ರೆ ಅವರಿಗೆ ಏನೇನು ಸಮಸ್ಯೆ ಇದೆ ಅನ್ನೋದು ಗೊತ್ತಿಲ್ಲ. ಪಕ್ಷ ಮತ್ತು ಸರ್ಕಾರಕ್ಕೆ ಸಮಸ್ಯೆ ಮಾಡಲು ನಾನು ತಯಾರಿಲ್ಲ. ನಾನೀಗಾಗಲೇ ಅನೇಕ ಇಲಾಖೆಗಳನ್ನ ನೋಡಿದ್ದೇನೆ. ಹಾಗಾಗಿ ನನಗೆ ಸಚಿವ ಸ್ಥಾನ ಬೇಡ ಅಂತ ಸಿಎಂಗೆ ಹೇಳಿದ್ದೇನೆ ಅಂತ ಈಶ್ವರಪ್ಪ ತಿಳಿಸಿದ್ದಾರೆ.

-masthmagaa.com

Contact Us for Advertisement

Leave a Reply