ನಾನು ಸನಾತನ ಧರ್ಮವನ್ನ ಪಾಲಿಸ್ತೀನಿ, ನಾನೊಬ್ಬ ಒಳ್ಳೆ ಹಿಂದೂʼ: ಕಾಂಗ್ರೆಸ್‌ ನಾಯಕ ದಿಗ್ವಿಜಯ ಸಿಂಗ್‌

masthmagaa.com:

ಕಾಂಗ್ರೆಸ್‌ನ ನಾಯಕ ದಿಗ್ವಿಜಯ ಸಿಂಗ್‌ ಮತ್ತು ಮಧ್ಯಪ್ರದೇಶದ ಸಿಎಂ ಶಿವರಾಜ್‌ ಸಿಂಗ್‌ ಚೌಹಾನ್‌ ನಡುವೆ ಸನಾತನ ಧರ್ಮದ ವಿಚಾರವಾಗಿ ವಾಕ್ಸಮರ ಮುಂದುವರೆದಿದೆ. ʼನಾನು ಸನಾತನ ಧರ್ಮವನ್ನ ಪಾಲಿಸ್ತೀನಿ. ನಾನೊಬ್ಬ ಒಳ್ಳೆ ಹಿಂದುʼ ಅಂತ ಕಾಂಗ್ರೆಸ್‌ನ ನಾಯಕ ದಿಗ್ವಿಜಯ ಸಿಂಗ್‌ ಅವ್ರು ಇಂದು ಮಾಧ್ಯಮದವರೊಂದಿಗೆ ಹೇಳಿಕೊಂಡಿದ್ದಾರೆ. ʻಅಯೋಧ್ಯೆ ರಾಮ ಮಂದಿರದ ನಿರ್ಮಾಣಕ್ಕೆ ಸಿಎಂ ಶಿವರಾಜ್‌ ಸಿಂಗ್‌ ಚೌಹಾನ್‌ ಅವ್ರು 1 ಲಕ್ಷ ರೂಪಾಯಿ ನೀಡಿದ್ರೆ, ನಾನು 1.11 ಲಕ್ಷ ರೂಪಾಯಿ ನೀಡಿದ್ದೇನೆ. ಆ ಚೆಕ್‌ನ್ನ ಪ್ರಧಾನಿ ಮೋದಿಯವ್ರಿಗೆ ನೀಡಿ ಟ್ರಸ್ಟ್‌ಗೆ ಒಪ್ಪಿಸುವಂತೆ ಹೇಳಿದ್ದೆʼ ಅಂತ ಮಾಧ್ಯಮದವರೊಂದಿಗೆ ಹೇಳಿಕೊಂಡಿದ್ದಾರೆ. ಅಂದ್ಹಾಗೆ ಕೆಲ ದಿನಗಳ ಹಿಂದೆ, ಸಿಎಂ ಶಿವರಾಜ್‌ ಸಿಂಗ್‌ ಚೌಹಾನ್‌ ಅವ್ರು ನವರಾತ್ರಿ ಸಂದರ್ಭದಲ್ಲಿ ಕನ್ಯಾ ಪೂಜೆಯನ್ನ ಮಾಡಿದ್ರು. ಇದಕ್ಕೆ ದಿಗ್ವಿಜಯ ಸಿಂಗ್‌ ಅವ್ರು ʻನಾಟಕೀಯʼ ಅಂತ ಟೀಕೆಯನ್ನ ಮಾಡಿದ್ರು. ಇದಕ್ಕೆ `X’ನಲ್ಲಿ ಪ್ರತಿಕ್ರಿಯೆಸಿದ ಶಿವರಾಜ್‌ ಸಿಂಗ್‌ ಚೌಹಾನ್‌, ʻಕನ್ಯಾ ಪೂಜೆಯನ್ನ ವಿರೋಧಿಸಿ, ಅದಕ್ಕೆ ನಾಟಕೀಯ ಅಂತ ಕರೆಯೋದು ಭಾರತೀಯ ಸಂಸ್ಕೃತಿ ಮತ್ತು ಪರಂಪರೆಗೆ ಅವಮಾನ ಮಾಡಿದ ಹಾಗೆ. ಹಾಗಾದ್ರೆ ಎಷ್ಟು ಅಂತ ಕಾಂಗ್ರೆಸ್‌ ಸನಾತನ ಧರ್ಮದ ಅಪಮಾನವನ್ನ ಮಾಡುತ್ತೆʼ ಅಂತ ಪೋಸ್ಟ್‌ ಮಾಡಿದ್ರು.

-masthmagaa.com

Contact Us for Advertisement

Leave a Reply