masthmagaa.com:
ಭಾರತದ ಜೊತೆ ಕಾಲು ಕೆರೆದು ಜಗಳಕ್ಕೆ ಬರೋ ಪಕ್ಕದ ಚೀನಾಗೆ ರಕ್ಷಣಾ ಸಚಿವ ರಾಜ್ನಾಥ್ ಸಿಂಗ್ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ. ಭಾರತ ಯುದ್ಧ ಮಾಡಲು ಇಷ್ಟ ಪಡೋಲ್ಲ. ಆದ್ರೆ ಯಾವುದಾದ್ರೂ ಸೂಪರ್ಪವರ್ ದೇಶ ಭಾರತದ ಸಾರ್ವಭೌಮತ್ವಕ್ಕೆ ಧಕ್ಕೆ ತರೋಕೆ ಪ್ರಯತ್ನಿಸಿದ್ರೆ ಅವರಿಗೆ ನಮ್ಮ ಯೋಧರು ತಕ್ಕ ಶಾಸ್ತಿ ಮಾಡ್ತಾರೆ ಅಂತ ರಾಜನಾಥ್ ಸಿಂಗ್ ಹೇಳಿದ್ದಾರೆ. ಇದರ ಜೊತೆಗೆ ಕಳೆದ ವರ್ಷ ಲಡಾಖ್ ಭಾಗದಲ್ಲಿ ಚೀನಾ ಯೋಧರ ಜೊತೆಗಿನ ಸಂಘರ್ಷದ ವೇಳೆ ಭಾರತೀಯ ಯೋಧರು ತೋರಿದ ಧೈರ್ಯ ಮತ್ತು ತಾಳ್ಮೆಗೆ ಪ್ರಶಂಸೆ ವ್ಯಕ್ತಪಡಿಸಿದ್ರು.
ಇನ್ನು HAL ಅಭಿವೃದ್ಧಿಪಡಿಸಿದ 83 ತೇಜಸ್ ಯುದ್ಧ ವಿಮಾನಗಳ ಖರೀದಿಗೆ ನಿನ್ನೆಯಷ್ಟೇ ಕೇಂದ್ರ ಸಚಿವ ಸಂಪುಟ ಗ್ರೀನ್ ಸಿಗ್ನಲ್ ಕೊಟ್ಟಿತ್ತಲಾ ಈ ಬಗ್ಗೆ ವಾಯುಸೇನಾ ಮುಖ್ಯಸ್ಥ ಆರ್.ಕೆ. ಎಸ್. ಭದೌರಿಯಾ ಮಾತನಾಡಿ, ‘ತೇಜಸ್ ವಿಮಾನವು ಚೀನಾ ಮತ್ತು ಪಾಕಿಸ್ತಾನ ಜಂಟಿಯಾಗಿ ಅಭಿವೃದ್ಧಿಪಡಿಸಿರುವ JF-7 ಯುದ್ಧ ವಿಮಾನಕ್ಕಿಂತ ಅಡ್ವಾನ್ಸ್ ಆಗಿದೆ, ಉತ್ತಮವಾಗಿದೆ’ ಅಂತ ಹೇಳಿದ್ದಾರೆ.
-masthmagaa.com
Contact Us for Advertisement