ನಾನು ಹುತಾತ್ಮರ ಮಗ ಅಂತ ಹೇಳಿದ್ಯಾಕೆ ರಾಹುಲ್ ಗಾಂಧಿ?

masthmagaa.com:

ಜಲಿಯನ್​​ವಾಲಾ ಬಾಗ್​ ನವೀಕರಣ ಈಗ ವಿವಾದದ ಕೇಂದ್ರ ಬಿಂದುವಾಗಿದೆ. ಯಾಕಂದ್ರೆ ನವೀಕರಣದ ವೇಳೆ ಹಳೆಯ ದಾರಿ ಮತ್ತು ಪ್ಯಾಸೇಜ್​​ನ್ನು ಹೈಟೆಕ್​​ ಗ್ಯಾಲರಿಗಳಾಗಿ ಪರಿವರ್ತಿಸಲಾಗಿದೆ. ಇದು ವಿರೋಧಕ್ಕೆ ಕಾರಣವಾಗಿದೆ. ನವೀಕರಣದ ಹೆಸರಲ್ಲಿ ಇತಿಹಾಸವನ್ನು ನಾಶ ಮಾಡಲಾಗ್ತಿದೆ ಅಂತ ವಿಪಕ್ಷಗಳು ಕೆಂಡಕಾರಿವೆ. ಈ ಬಗ್ಗೆ ಟ್ವೀಟ್ ಮಾಡಿರೋ ರಾಹುಲ್ ಗಾಂಧಿ, ಜಲಿಯನ್ ವಾಲಾಬಾಗ್ ಹುತಾತ್ಮರಿಗೆ ಇಂಥಹ ಅವಮಾನವನ್ನು ಹುತಾತ್ಮತೆಯ ಅರ್ಥ ಗೊತ್ತಿಲ್ಲದವರು ಮಾತ್ರವೇ ಮಾಡಬಹುದಷ್ಟೆ.. ನಾನು ಓರ್ವ ಹುತಾತ್ಮರ ಮಗ.. ಹೀಗಾಗಿ ಹುತಾತ್ಮರಿಗೆ ಆದ ಅವಮಾನವನ್ನು ನಾನು ಯಾವುದೇ ಕಾರಣಕ್ಕೂ ಸಹಿಸೋದಿಲ್ಲ. ಈ ಅಸಭ್ಯ ಕೃತ್ಯವನ್ನು ವಿರೋಧಿಸ್ತೀವಿ ಅಂತ ಹೇಳಿದ್ದಾರೆ. ಕಮ್ಯೂನಿಸ್ಟ್​ ಪಾರ್ಟಿ ಆಫ್ ಇಂಡಿಯಾದ ಸೀತಾರಾಂ ಯೆಚೂರಿಯಂತೂ ಸ್ವಾತಂತ್ರ್ಯದಲ್ಲಿ ಭಾಗಿಯಾಗದವರಿಂದ ಮಾತ್ರ ಈ ರೀತಿ ಮಾಡಲು ಸಾಧ್ಯ ಅಂತ ಕುಟುಕಿದ್ದಾರೆ.

-masthmagaa.com

Contact Us for Advertisement

Leave a Reply