ಸತ್ಯೇಂದ್ರ ಜೈನ್, ಮನೀಶ್ ಸಿಸೋಡಿಯಾ ರಾಜೀನಾಮೆ! ಯಾರ ಪಾಲಾಗಲಿದೆ ಸಚಿವ ಸ್ಥಾನ?

masthmagaa.com:

ದೆಹಲಿ ಲಿಕ್ಕರ್‌ ಕೇಸ್‌ನಲ್ಲಿ ಬಂಧಿಸಲಾಗಿರುವ ದಿಲ್ಲಿ ಡಿಸಿಎಂ ಮನೀಷ್‌ ಸಿಸೋಡಿಯಾ ಅವ್ರು ತಮ್ಮ ರಾಜೀನಾಮೆ ಪತ್ರದಲ್ಲಿ ʻಅವ್ರ ಟಾರ್ಗೆಟ್‌ ನಾನಲ್ಲ, ನೀವು ಅಂತ ಕೇಜ್ರಿವಾಲ್‌ʼಗೆ ಹೇಳಿದ್ದಾರೆ. ಎಂಟು ವರ್ಷದಿಂದ ಪ್ರಾಮಾಣಿಕವಾಗಿ ಕೆಲಸ ಮಾಡಿದ್ರೂ ನನ್ನ ಮೇಲೆ ಭ್ರಷ್ಟಾಚಾರದ ಆರೋಪ ಹೊರಿಸುತ್ತಿರೋದು ದುರಾದೃಷ್ಟಕರ. ದೆಹಲಿ ಸಿಎಂ ಕೇಜ್ರಿವಾಲ್ ಅವರ ಸತ್ಯದ ರಾಜಕಾರಣಕ್ಕೆ ಕೆಲವರು ಹೆದರಿದ್ದಾರೆ. ನಾನು ಅವರ ಟಾರ್ಗೆಟ್ ಅಲ್ಲ, ನೀವು ಕೇಜ್ರಿವಾಲ್..ಅಂತ ಸಿಸೋಡಿಯಾ ತಮ್ಮ ರಾಜೀನಾಮೆ ಪತ್ರದಲ್ಲಿ ಉಲ್ಲೇಖಿಸಿದ್ದಾರೆ ಅಂತ ವರದಿಯಾಗಿದೆ. ಇತ್ತ ಆರೋಗ್ಯ ಸಚಿವ ಸತ್ಯೇಂದ್ರ ಜೈನ್ ಮತ್ತು ಡಿಸಿಎಂ ಮನೀಶ್ ಸಿಸೋಡಿಯಾ ರಾಜೀನಾಮೆಯಿಂದ ತೆರವಾಗಿರುವ 2 ಸಚಿವ ಸ್ಥಾನಗಳನ್ನ ಭರ್ತಿ ಮಾಡಲು ಸಿಎಂ ಅರವಿಂದ್ ಕೇಜ್ರಿವಾಲ್ ನಿರ್ಧರಿಸಿದ್ದು, ಸಚಿವರಾದ ಕೈಲಾಶ್‌ ಗೆಹ್ಲೋಟ್‌ ಮತ್ತು ರಾಜಕುಮಾರ್‌ ಆನಂದ್‌ ಅವ್ರಿಗೆ ಹೆಚ್ಚುವರಿ ಇಲಾಖೆಗಳ ಜವಾಬ್ದಾರಿಯನ್ನ ನೀಡುವ ಪ್ರಸ್ತಾವನೆಯನ್ನ ದಿಲ್ಲಿ ಲೆಫ್ಟಿನೆಂಟ್‌ ಗವರ್ನರ್‌ ವಿ.ಕೆ ಸಕ್ಸೇನಾ ಅನುಮೋದಿಸಿದ್ದಾರೆ.

-masthmagaa.com

Contact Us for Advertisement

Leave a Reply