ಸ್ವಾಮಿ ವಿವೇಕಾನಂದರ ಬಗ್ಗೆ ಅವಹೇಳನ ಮಾಡಿದ್ದ ಇಸ್ಕಾನ್‌ ಸನ್ಯಾಸಿ ಬ್ಯಾನ್‌!

masthmagaa.com:

ಸ್ವಾಮಿ ವಿವೇಕಾನಂದ ಮತ್ತು ರಾಮಕೃಷ್ಣ ಪರಮಹಂಸ ಅವರ ಕುರಿತು ಅವಹೇಳನಾಕಾರಿ ಹೇಳಿಕೆ ನೀಡಿದ್ದಕ್ಕಾಗಿ ಇಸ್ಕಾನ್‌ ಸನ್ಯಾಸಿ ಅಮೋಘ ಲೀಲಾ ದಾಸ್ ಅವರನ್ನ ಒಂದು ತಿಂಗಳು ಬ್ಯಾನ್‌ ಮಾಡಿರೋದಾಗಿ ಇಸ್ಕಾನ್‌ ಹೇಳಿದೆ. ಇತ್ತೀಚೆಗೆ ಪ್ರವಚನ ಕಾರ್ಯಕ್ರಮವೊಂದ್ರಲ್ಲಿ ಸದ್ಗುಣ ಇರೋ ವ್ಯಕ್ತಿಗಳು ಯಾವುದೇ ಪ್ರಾಣಿಗೆ ಹಾನಿ ಮಾಡೋದಿಲ್ಲ ಹಾಗೂ ಸೇವಿಸೋದು ಇಲ್ಲ. ಆದ್ರೆ ಸ್ವಾಮಿ ವಿವೇಕಾನಂದರು ಮೀನು ತಿನ್ತಾಯಿದ್ರು ಅಂತ ಅಮೋಘ ದಾಸ್‌ ಹೇಳಿಕೆ ನೀಡಿದ್ದಾರೆ. ಅಲ್ದೆ ರಾಮಕೃಷ್ಣ ಪರಮಹಂಸರ ಬೋಧನೆ ಕುರಿತು ಹಾಸ್ಯ ಮಾಡಿದ್ದಾರೆ. ಈ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗ್ತಿದ್ದಂತೆ, ಆಕ್ರೋಶ ವ್ಯಕ್ತವಾಗಿದೆ. ಈ ಹಿನ್ನಲೆಯಲ್ಲಿ ಇಸ್ಕಾನ್‌ ಹೇಳಿಕೆಯೊಂದನ್ನ ಬಿಡುಗಡೆ ಮಾಡಿದ್ದು, ಅಮೋಘ ದಾಸ್‌ ಅವ್ರು ತಮ್ಮ ತಪ್ಪನ್ನ ಒಪ್ಪಿಕೊಂಡಿದ್ದಾರೆ. ಅಲ್ದೆ ತಮ್ಮ ತಪ್ಪಿನ ಪ್ರಾಯಶ್ಚಿತಕ್ಕಾಗಿ ಒಂದು ತಿಂಗಳು ಸಮಾಜದಿಂದ ದೂರ ಇರಲಿದ್ದಾರೆ ಅಂತ ತಿಳಿಸಿದೆ. ಜೊತೆಗೆ ದಾಸ್‌ ಅವ್ರ ಅಭಿಪ್ರಾಯ ಇಸ್ಕಾನ್‌ ಅನ್ನ ಪ್ರತಿನಿಧಿಸೋದಿಲ್ಲ ಹಾಗೂ ಇತರ ಧಾರ್ಮಿಕ ಆಚರಣೆಗಳು ಅಥ್ವಾ ನಂಬಿಕೆಗೆ ಅಗೌರವ ತೋರೋದನ್ನ ಇಸ್ಕಾನ್‌ ಖಂಡಿಸುತ್ತೆ ಅಂತ ಹೇಳಿಕೆಯಲ್ಲಿ ತಿಳಿಸಲಾಗಿದೆ.

 

-masthmagaa.com

Contact Us for Advertisement

Leave a Reply