masthmagaa.com:
ಜಮ್ಮು ಕಾಶ್ಮೀರದ ಶೋಪಿಯಾನ್ನಲ್ಲಿ ಇವತ್ತು ಲಷ್ಕರ್ ಬೆಂಬಲಿತ ದಿ ರೆಸಿಸ್ಟೆನ್ಸ್ ಫ್ರಂಟ್ನ ಇಬ್ಬರು ಉಗ್ರರನ್ನು ಹೊಡೆದುರುಳಿಸಲಾಗಿದೆ. ಇವರಲ್ಲಿ ಒಬ್ಬ ಆದಿಲ್ ವಾನಿ.. ಇತ್ತೀಚೆಗೆ ನಡೆದ ಉತ್ತರ ಪ್ರದೇಶದ ಕಾರ್ಪೆಂಟರ್ ಹತ್ಯೆಯಲ್ಲಿ ಈತನ ಕೈವಾಡ ಇತ್ತು ಅಂತ ಕಾಶ್ಮೀರ ಝೋನ್ ಐಜಿಪಿ ವಿಜಯ್ ಕುಮಾರ್ ಮಾಹಿತಿ ನೀಡಿದ್ದಾರೆ. ಶೋಪಿಯಾನ್ನ ದ್ರಗಡ್ನಲ್ಲಿ ಉಗ್ರರು ಅಡಗಿರೋ ಬಗ್ಗೆ ಮಾಹಿತಿ ಸಿಕ್ಕಿದ್ದರಿಂದ ಕಾರ್ಯಾಚರಣೆ ನಡೆಸಿದ ಯೋಧರು, ದುಷ್ಟರನ್ನು ಹೊಡೆದುರುಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಮೂಲಕ 2 ವಾರದಲ್ಲಿ 15 ಉಗ್ರರನ್ನು ಹೊಡೆದುರುಳಿಸಿದಂತಾಗಿದೆ ಅಂತ ಪೊಲೀಸರು ಮಾಹಿತಿ ನೀಡಿದ್ದಾರೆ.
ಜಮ್ಮು ಕಾಶ್ಮೀರದಲ್ಲಿ ಇತ್ತೀಚೆಗೆ ನಡೆದ ಭಯೋತ್ಪಾದನೆ ದಾಳಿ ಮತ್ತು ಅದಕ್ಕೆ ಸಂಚು ರೂಪಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಜಮ್ಮು ಕಾಶ್ಮೀರದ 11 ಕಡೆ ಇವತ್ತು ಎನ್ಐಎ ದಾಳಿ ನಡೆಸ್ತು. ಶ್ರೀನಗರ, ಬಾರಾಮುಲ್ಲಾ, ಪುಲ್ವಾಮಾ, ಅವಂತಿಪೋರಾ, ಸೋಪೋರ್ ಮತ್ತು ಕುಲ್ಗಾಂಗಳಲ್ಲಿ ಈ ದಾಳಿ ನಡೆದಿದೆ.
-masthmagaa.com
Contact Us for Advertisement