masthmagaa.com:
ಮಾಜಿ ಮುಖ್ಯಮಂತ್ರಿ ಎಚ್ಡಿ ಕುಮಾರಸ್ವಾಮಿ RSS ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ಅವ್ರನ್ನ ಹಾಡಿ-ಹೊಗಳಿದ್ದಾರೆ. ಒಂದು ಕಾಲದಲ್ಲಿ ಹಾವು ಮುಂಗುಸಿಯಂತಿದ್ದ ಇವ್ರು ಈಗ ಒಂದೇ ವೇದಿಕೆಯಲ್ಲಿ ಅಕ್ಕ-ಪಕ್ಕ ಕುಳಿತು ದೋಸ್ತಿಗಳಾಗಿದ್ದಾರೆ. ದಕ್ಷಿಣ ಕನ್ನಡದ ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದ ಕಾರ್ಯಕ್ರಮಕ್ಕೆ ಚೀಫ್ ಗೆಸ್ಟ್ ಆಗಿ ಕುಮಾರಸ್ವಾಮಿ ಹೋಗಿದ್ರು. ಈ ವೇಳೆ ʻಈ ಹಿಂದೆ ಪ್ರಭಾಕರ್ ಅವ್ರನ್ನ ಟೀಕೆ ಮಾಡಿದ್ದೆ. ಅವ್ರ ಬಗ್ಗೆ ಸರಿಯಾದ ಮಾಹಿತಿ ಇರ್ಲಿಲ್ಲ. ಕೆಲವರು ನನ್ನ ದಾರಿ ತಪ್ಪಿಸಿದ್ರು. ಇಂದು ನನ್ನ ಕಣ್ಣು ತೆರೆದಿದೆ. ಈ ಹಿಂದೆ ಆಡಿದ್ದ ಮಾತುಗಳ ಬಗ್ಗೆ ವಿಷಾದ ಇದೆ.ʼ ಅಂತ ಕುಮಾರಸ್ವಾಮಿ ಹೇಳಿದ್ದಾರೆ. ಮಾತಿನ ಕೊನೆಯಲ್ಲಿ ʻಜೈಶ್ರೀರಾಮ್ʼ ಅಂತ ಹೇಳಿ ಶಾಕ್ ಕೊಟ್ಟಿದ್ದಾರೆ. ಕುಮಾರಸ್ವಾಮಿ ನಡೆಯನ್ನ ಟೀಕೆ ಮಾಡಿರೋ ನೆಟ್ಟಿಗರು ʻಅಧಿಕೃತವಾಗಿ ಕುಮಾರಸ್ವಾಮಿ ಅವರನ್ನ ಸಂಘ ಪರಿವಾರ ಮನೆ ತುಂಬಿಸಿಕೊಂಡಿಸಿದೆʼ ಅಂತ ಕಾಲೆಳೆದಿದ್ದಾರೆ.
-masthmagaa.com
Contact Us for Advertisement