ಇದೇ ಮೇ 27ಕ್ಕೆ ‘ಕಾಣೆಯಾದವರ ಬಗ್ಗೆ ಪ್ರಕಟಣೆ’ ರಿಲೀಸ್!

masthmagaa.com:

ಟೈಟಲ್ ಮತ್ತು ಪೋಸ್ಟರ್ ಮೂಲಕವೇ ಗಮನ ಸೆಳೆದಿರುವ ಕನ್ನಡ ಚಿತ್ರವೊಂದು ಬಿಡುಗಡೆಗೆ ರೆಡಿ ಆಗಿದೆ. ಹೌದು, ಸ್ಯಾಂಡಲ್‌ವುಡ್‌ನ ಖ್ಯಾತ ಪೋಷಕ ಕಲಾವಿದರಾದ ರಂಗಾಯಣ ರಘು, ರವಿಶಂಕರ್‌ ಮತ್ತು ತಬಲಾ ನಾಣಿ ಮುಖ್ಯಭೂಮಿಕೆಯಲ್ಲಿರುವ ‘ಕಾಣೆಯಾದವರ ಬಗ್ಗೆ ಪ್ರಕಟಣೆ’ ಸಿನಿಮಾ ಇದೇ ಮೇ 27ನೇ ತಾರೀಖು ಬಿಡುಗಡೆ ಆಗುತ್ತಿದೆ. ಈ ಸಿನಿಮಾದಲ್ಲಿ ಪೋಷಕ ಕಲಾವಿದರದೇ ಕಾರುಬಾರು. ಒಂದರ್ಥದಲ್ಲಿ ‘ಕಾಣೆಯಾದವರ ಬಗ್ಗೆ ಪ್ರಕಟಣೆ’ ಚಿತ್ರಕ್ಕೆ ಇವರೇ ನಾಯಕರು ಅನ್ನಬಹುದು.

ಒಂದು ತಿಂಗಳ ಹಿಂದೆ ಬಿಡುಗಡೆ ಆಗಿರುವ ‘‘ಕಾಣೆಯಾದವರ ಬಗ್ಗೆ ಪ್ರಕಟಣೆ’ ಚಿತ್ರದ ಟ್ರೈಲರ್ ನೋಡಿದವರಿಗೆ ಇದು ರೆಗ್ಯಲರ್ ಸ್ಟೈಲ್‌ನ ಸಿನಿಮಾ ಅಲ್ಲ ಅನ್ನೋದು ಮನದಟ್ಟು ಆಗಿರುತ್ತೆ. 60’s, 80’s ಬ್ಯಾಕ್ ಡ್ರಾಪ್ ಜೊತೆಗೆ ಮನುಷ್ಯರ ನಡುವೆ ಸಂಬಂಧಗಳು ಹೇಗೆ ಕೆಲಸ ಮಾಡುತ್ತವೆ, ಸಂಬಂಧಗಳಿಗೆ ಒಬ್ಬ ವ್ಯಕ್ತಿ ಎಷ್ಟು ಬೆಲೆ ಕೊಡಬೇಕು ಎನ್ನುವಂಥ ಸೂಕ್ಷ್ಮ ವಿಚಾರಗಳನ್ನ ಇಟ್ಟುಕೊಂಡು ಈ ಕಥೆಯನ್ನ ಹೆಣೆಯಲಾಗಿದೆ.
ಅದ್ದೂರಿ ಮೇಕಿಂಗ್ ನಿಂದ ಗಮನ ಸೆಳೆಯುವ ಸಿನಿಮಾದ ಟ್ರೈಲರ್ ಒಂದೊಳ್ಳೆ ಕಂಟೆಂಟ್ ಇರುವ ಕನ್ನಡ ಸಿನಿಮಾ ಇದಾಗಿರಾತ್ತೆ ಅನ್ನೋ ನಿರೀಕ್ಷೆಯನ್ನ ಮೂಡಿಸುತ್ತಾ ಇದೆ. ಆದ್ರೆ ಇದೆಲ್ಲದರ ಜೊತೆಗೆ ಒಳಗಡೆ ವಿಷ್ಯ ಬೇರೆ ಏನೋ ಇದೆ ಅಂತ ಕೂಡ ಅನ್ನಿಸ್ತಾ ಇದೆ.
ಇನ್ನು ಈ ಸಿನಿಮಾಗೆ ‘ದಿಲ್‌ವಾಲ’, ‘ರೆಂಬೋ 2’, ‘ಶಕ್ತಿ’ಯಂತಹ ಮಾಸ್‌ ಸಿನಿಮಾಗಳನ್ನು ನಿರ್ದೇಶನ ಮಾಡಿದ್ದ ನಿರ್ದೇಶಕ ಕಮ್‌ ಸಂಭಾಷಣೆಕಾರ ಅನಿಲ್‌ ಕುಮಾರ್‌ ನಿರ್ದೇಶನ ಮಾಡಿದ್ದಾರೆ. ತಮ್ಮ ಸ್ನೇಹಿತರೊಂದಿಗೆ ಸೇರಿಕೊಂಡು ತಾವೇ ಈ ಚಿತ್ರವನ್ನು ನಿರ್ಮಾಣ ಕೂಡ ಮಾಡಿದ್ದಾರೆ.
ಒಟ್ನಲ್ಲಿ ಕಥೆಯೇ ನಾಯಕ ಆಗಿರುವ ಈ ಅದ್ದೂರಿ ಸಿನಿಮಾದಲ್ಲಿ ಚಿಕ್ಕಣ್ಣ, ತಿಲಕ್ ಮತ್ತು ಆಶಿಕ ರಂಗನಾಥ್ ಕೂಡ ವಿಶೇಷ ಪಾತ್ರದಲ್ಲಿ ನಟಿಸಿದ್ದಾರೆ. ಚಿತ್ರಕ್ಕೆ ಅರ್ಜುನ್ ಜನ್ಯಾ ಸಂಗೀತ ಮತ್ತು KM ಪ್ರಕಾಶ್ ಸಂಕಲನವಿದೆ. ಟ್ರೈಲರ್ ಮತ್ತು ಹಾಡುಗಳಿಂದ ನಿರೀಕ್ಷೆ ಹುಟ್ಟಿಸಿರುವ ಈ ಸಿನಿಮಾ ಇದೆ ಮೇ 27 ನೇ ತಾರೀಖು ಬಿಡುಗಡೆ ಆಗುತ್ತಿದೆ.
-masthmagaa.com
Contact Us for Advertisement

Leave a Reply