ಆತ ಬೆಳಗಾವಿಗೆ ಬಂದಾಗ ಎಲ್ಲಿ ಪ್ಯಾಂಟ್‌ ಬಿಚ್ಚುತ್ತಾನೆ ಅಂತ ನಮಗೆ ಗೊತ್ತು: ಡಿಕೆಶಿ ವಿರುದ್ದ ಲಖನ್‌ ಕಿಡಿ!

masthmagaa.com:

ರಮೇಶ್‌ ಜಾರಕಿಹೊಳಿಗೆ ನಾನೇನ್‌ ಪ್ಯಾಂಟ್‌ ಬಿಚ್ಚೋಕೆ ಹೇಳಿದ್ನಾ ಅಂತ ಡಿಕೆಶಿ ಕೆಲದಿನಗಳ ಹಿಂದೆ ಒಂದು ಹೇಳಿಕೆ ಕೊಟ್ಟಿದ್ರು. ಅದಕ್ಕೆ ಈಗ ರಮೇಶ್‌ ಜಾರಕಿಹೊಳಿ ಸಹೋದರ ಲಖನ್‌ ಜಾರಕಿಹೊಳಿ ಅದೇ ದಾಟಿಯಲ್ಲಿ ಕರ್ಣ ಕಠೋರವಾದ ಶಬ್ದಗಳನ್ನ ಬಳಸಿ ಡಿಕೆಶಿಗೆ ಟಾಂಗ್‌ ಕೊಟ್ಟಿದ್ದಾರೆ. ಲಂಚ ಮಂಚ ಅಂತ ಈ ಮಹಾರಾಜ ಹೇಳ್ತಾನೆ. ಇವನ ಲಂಚ ಇವನ ಮಂಚ ಎಲ್ಲಿದೆ, ಬೆಳಗಾವಿಗೆ ಬಂದಾಗ ಈತ ಎಲ್ಲಿ ಪ್ಯಾಂಟ್‌ ಬಿಚ್ಚುತ್ತಾನೆ ಅಂತ ಇಡೀ ಬೆಳಗಾವಿಯಲ್ಲಿ ಎಲ್ಲಾ ಓಪನ್‌ ಸೀಕ್ರೆಟ್‌ ಇದೆ. ನಮಗೂ ಎಲ್ಲಾ ಗೊತ್ತಿದೆ..ಆದ್ರೆ ಈತ ಹೇಳ್ತಾನೆ ನಾವು ಹೇಳೋದಿಲ್ಲ ಅಷ್ಟೇ. ಸಮಯ ಬಂದಾಗ ಗಾಡಿ ಎಲ್ಲಿಗೆ ಹೋಗುತ್ತೆ. ಎಲ್ಲಿ ಲುಂಗಿ ಬಿಚ್ಚುತ್ತೆ ಎಲ್ಲಾನೂ ಹೇಳ್ತೀವಿ ಅಂತ ಕೌಂಟರ್‌ ಕೊಟ್ಟಿದ್ದಾರೆ. ಇನ್ನು ಆ ಕಡೆ ಸಿದ್ರಾಮಯ್ಯ ಅವರು ಮೊನ್ನೆ ತಾನೇ ನನ್ನ ಹೆಣ ಕೂಡ ಬಿಜೆಪಿಗೆ ಹೋಗಲ್ಲ ಅಂತ ಹೇಳಿದ್ರು. ಅದಕ್ಕೆ ಇವತ್ತು ಈಶ್ವರಪ್ಪ ಪ್ರತಿಕ್ರಿಯಿಸಿ ಅವರು ಜೀವಂತವಾಗಿದ್ರೂ ನಾವು ಅವರನ್ನ ಪಕ್ಷಕ್ಕೆ ಕರೆದುಕೊಳ್ಳಲ್ಲ. ಅವರ ಹೆಣವನ್ನ ನಾಯಿನೂ ಮೂಸಲ್ಲ. ನಾವೇಕ್‌ ಅವರ ಹೆಣ ಮುಟ್ಟೋಣ ಅಂತ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply