masthmagaa.com:
ರಾಜ್ಯದಲ್ಲಿ ಕೊರೋನಾ ಕೂಡ ಜಾಸ್ತಿಯಾಗ್ತಿದ್ದು, ಇವತ್ತು ಒಂದೇ ದಿನ 14,473 ಮಂದಿಗೆ ಕೊರೋನಾ ಬಂದಿದೆ. ಬೆಂಗಳೂರು ಒಂದ್ರಲ್ಲೇ 10,800 ಮಂದಿಗೆ ಸೋಂಕು ತಗುಲಿದೆ. ರಾಜ್ಯದ ಪಾಸಿಟಿವಿಟಿ ದರ 10.30 ಪರ್ಸೆಂಟ್ಗೆ ಏರಿಕೆಯಾಗಿದೆ.
ಇನ್ನು ಸಿಎಂ ಬಸವರಾಜ್ ಬೊಮ್ಮಾಯಿಗೆ ಕೊರೋನಾ ಬಂದ ಬಳಿಕ ಅವರ ಮಗ ಮತ್ತು ಸೊಸೆಗೂ ಕೊರೋನಾ ಬಂದಿದೆ. ಸಿಎಂಗೆ ಪ್ರಧಾನಿ ಮೋದಿ ಕರೆ ಮಾಡಿ, ಆರೋಗ್ಯ ವಿಚಾರಿಸಿದ್ದಾರೆ ಅಂತ ಗೊತ್ತಾಗಿದೆ. ಇನ್ನು ಸಚಿವ ಸಿ ಮಾಧುಸ್ವಾಮಿ ಮತ್ತು ಅವರ ಮಗಳಿಗೂ ಸೋಂಕು ಬಂದಿದೆ. ಇತ್ತೀಚೆಗೆ ಸಿಎಂ ಜೊತೆಗಿನ ಸಭೆಯಲ್ಲಿ ಭಾಗಿಯಾಗಿದ್ದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ಆರೋಗ್ಯ ಸಚಿವ ಡಾ ಸುಧಾಕರ್ ಕ್ವಾರಂಟೈನ್ಗೆ ಒಳಗಾಗಿದ್ದಾರೆ. ಇಷ್ಟೇ ಅಲ್ಲ.. ಮೇಕೆದಾಟು ಪಾದಯಾತ್ರೆಯಲ್ಲಿ ಭಾಗಿಯಾಗಿದ್ದ ಮಾಜಿ ಸಚಿವ ಎಚ್ಎಂ ರೇವಣ್ಣ ಮತ್ತು ಸಿಎಂ ಇಬ್ರಾಹಿಂಗೂ ಕೊರೋನಾ ಸೋಂಕು ಪತ್ತೆಯಾಗಿದೆ.
-masthmagaa.com
Contact Us for Advertisement