masthmagaa.com:
ಕಾಂಗ್ರೆಸ್ ಪಕ್ಷವನ್ನ ತೊರೆದು ಬಿಜೆಪಿ ಸೇರಿದ್ದ ಶಾಸಕರನ್ನ ಕಾಂಗ್ರೆಸ್ ನಾಯಕ ಬಿಕೆ ಹರಿಪ್ರಸಾದ್ ವೇಶ್ಯೆಗೆ ಹೋಲಿಸಿದ್ರು. ಇದಕ್ಕೆ ಸಾಕಷ್ಟು ಆಕ್ರೋಶ ವ್ಯಕ್ತವಾಗಿತ್ತು. ಇದರ ಬೆನ್ನಲ್ಲೇ ಪ್ರತಿಕ್ರಿಯಿಸಿರೊ ಹರಿಪ್ರಸಾದ್, ಹೊಸಪೇಟೆಯಲ್ಲಿ ಲೈಂಗಿಕ ಕಾರ್ಯಕರ್ತೆಯರ ಬಗ್ಗೆ ನಾನು ನೀಡಿದ ಹೇಳಿಕೆಯನ್ನು ಕೆಲವರು ತಿರುಚಿದ್ದಾರೆ. ನನಗೆ ಲೈಂಗಿಕ ಕಾರ್ಯಕರ್ತೆಯರು, ಅವರ ಕೆಲಸದ ಬಗ್ಗೆ ಅಪಾರವಾದ ಗೌರವವಿದೆ. ನನ್ನ ಹೇಳಿಕೆಯಿಂದ ಅವರಿಗೆ ನೋವಾಗಿದ್ರೆ ಕ್ಷಮೆ ಕೇಳ್ತೀನಿ ಎಂದಿದ್ದಾರೆ. ಇದರ ಜೊತೆಗೆ ಕೃಷಿ ಸಚಿವ ಬಿ ಸಿ ಪಾಟೀಲ್ ವಿರುದ್ದ ವಾಗ್ದಾಳಿ ಮಾಡಿದ್ದಾರೆ. ನನ್ನ ಹೇಳಿಕೆ ನಂತರ ಕೆಲವರು ಹೇಳಿಕೆ ಕೊಟ್ಟಿದ್ದಾರೆ. ಯಶವಂತಪುರದಲ್ಲಿ ಪೋಲಿಸ್ ಆಗಿದ್ದಾಗ ಪೊರಕೆ ಹಾಗೂ ಚಪ್ಪಲಿಯಲ್ಲಿ ಯಾಕೆ ಹೊಡಿಸಿಕೊಂಡಿದ್ದಾರೆ ಅಂತ ಕೇಳಿ, ಇವರ ಹೇಳಿಕೆ ಬಗ್ಗೆ ಟೀಕೆ ಟಿಪ್ಪಣಿ ಮಾಡಲ್ಲ. ನಾನು ರಾಜಮಾರ್ಗದಿಂದ ಬಂದವನು. ಹಿಂಬಂದಿಯಿಂದ ಬಂದವನಲ್ಲ. ಇವರ ರೀತಿಯಲ್ಲಿ ಸೀಕ್ರೆಟ್ ಬಾಗಿಲಲ್ಲಿ ಬಂದಿಲ್ಲ ಅಂತ ಟಾಂಗ್ ಕೊಟ್ಟಿದ್ದಾರೆ. ಜೊತೆಗೆ ಬಿಜೆಪಿಯಲ್ಲಿ ಸ್ಯಾಂಟ್ರೋ ರವಿ, ಸಿ ಟಿ ರವಿ, ಫೈಟರ್ ರವಿಯಂಥ ಪಿಂಪ್ ರವಿಗಳೇ ತುಂಬಿ ತುಳುಕುತ್ತಿದ್ದಾರೆ ಅಂತ ಹೇಳಿದ್ದಾರೆ.
-masthmagaa.com
Contact Us for Advertisement