ಕರ್ನಾಟಕ ಸರಕಾರ ಈಗಾಗಲೇ ಹೊರಾಂಗಣ ಚಿತ್ರೀಕರಣಕ್ಕೆ ಅವಕಾಶ ಕೊಟ್ಟಿದೆ. ಎಲ್ಲ ರೀತಿಯ ಕೋವಿದ್ ನಿಯಮಾವಳಿಗಳ ಪಾಲನೆ ಖಡ್ಡಾಯ ಎಂದು ತಾಕೀತು ಮಾಡಿದೆ. ಆದರೆ ಒಳಾಂಗಣ ಚಿತ್ರೀಕರಣದ ಬಗ್ಗೆ ಯಾವುದೇ ರೀತಿಯ ಅಧಿಸೂಚನೆ ನೀಡಿರಲಿಲ್ಲ.
ಈ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ರವಿಕುಮಾರ್ ಅವರನ್ನು ಭೇಟಿಯಾಗಿರುವ ವಾಣಿಜ್ಯ ಮಂಡಳಿಯ ಕಾರ್ಯದರ್ಶಿ ಎನ್ ಎಂ ಸುರೇಶ್, ಉಪಾಧ್ಯಕ್ಷರಾದ ನಾಗಣ್ಣ ಹಾಗೂ ಉಮೇಶ್ ಬಣಕಾರ್ ಅವರು ಒಳಾಂಗಣ ಚಿತ್ರೀಕರಣಕ್ಕೆ ಅನುಮತಿ ಕೊಡಬೇಕೆಂದು ನಿನ್ನ ಮನವಿ ಸಲ್ಲಿಸಿದ್ದಾರೆ.