ಹಿಂದೂ ಕಾರ್ಯಕರ್ತರೇ ರಾಜ್ಯ ಕಾಂಗ್ರೆಸ್‌ನ ಟಾರ್ಗೆಟ್ :‌ ಬಿಜೆಪಿ ಕಿಡಿ!

masthmagaa.com:

31 ವರ್ಷ ಹಳೇ ಕೇಸ್‌ನಲ್ಲಿ ಕರಸೇವಕ ಶ್ರೀಕಾಂತ್‌ ಪೂಜಾರಿಯನ್ನ ಪೋಲಿಸರು ಅರೆಸ್ಟ್‌ ಮಾಡಿದ್ದಾರೆ. 1992ರಲ್ಲಿ ಬಾಬ್ರಿ ಮಸೀದಿ ಧ್ವಂಸದ ಬಳಿಕ ಹುಬ್ಬಳ್ಳಿಯ ಗಲಭೆ ಕೇಸ್‌ನಲ್ಲಿ ಪೂಜಾರಿ ಭಾಗಿಯಾಗಿದ್ದ ಆರೋಪದ ಮೇಲೆ ಅವ್ರನ್ನ ಬಂಧಿಸಲಾಗಿದೆ. ಇದಕ್ಕೆ ರಿಯಾಕ್ಟ್‌ ಮಾಡಿರೋ ರಾಜ್ಯ ಕಮಲ ಪಡೆ,” ಹಾಡುಹಗಲೇ ಉಗ್ರ ಚಟುವಟಿಕೆ ನಡೆಸೋ ಜಿಹಾದಿಗಳನ್ನ ಅಮಾಯಕರು ಅಂತ ಕಾಂಗ್ರೆಸ್‌ ಹೇಳುತ್ತೆ. ಆದ್ರೆ ಹಿಂದೂಗಳ ವಿರುದ್ದ ದ್ವೇಷದ ಪಾಲಿಟಿಕ್ಸ್‌ ಮಾಡ್ತಿದೆ. ಕಾಂಗ್ರೆಸ್‌ಗೆ ರಾಮ ಮಂದಿರ ಕಟ್ಟೋದನ್ನ ಸಹಿಸೋಕಾಗ್ತಿಲ್ಲ” ಅಂತ ಎಕ್ಸ್‌ನಲ್ಲಿ ಕಿಡಿಕಾರಿದೆ.

-masthmagaa.com

Contact Us for Advertisement

Leave a Reply