ತೆಲಂಗಾಣ ಸಿಎಂ ಭೇಟಿ ಬಗ್ಗೆ ಜಮೀರ್‌ ಅಹಮದ್‌ ಹೇಳಿದ್ದೇನು?

masthmagaa.com:

ತೆಲಂಗಾಣ ಸಿಎಂ ಕೆಸಿಆರ್‌ ಅವ್ರನ್ನ ಭೇಟಿ ಮಾಡಿ, ರಾಜ್ಯ ಕಾಂಗ್ರೆಸ್‌ ವಿರುದ್ದ ಸಂಚು ರೂಪಿಸುತ್ತಿದ್ದಾರೆ ಅಂತ ಕಾಂಗ್ರೆಸ್‌ ಶಾಸಕ ಜಮೀರ್‌ ಅಹಮದ್‌ ವಿರುದ್ದ ಆರೋಪ ಕೇಳಿ ಬಂದಿತ್ತು. ಇದೀಗ ಇದಕ್ಕೆ ಪ್ರತಿಕ್ರಿಯಿಸಿರೊ ಜಮೀರ್‌, ನಾನು ಹೈದರಾಬಾದ್‌ಗೆ ಹೋಗಿದ್ದು ಸತ್ಯ ಹಾಗೇ ತೆಲಂಗಾಣ ಸಿಎಂರನ್ನ ಭೇಟಿ ಮಾಡಿದ್ದು ಸತ್ಯ. ಆದರೆ 500 ಕೋಟಿ ರೂ. ಆಫರ್‌ ಬಗ್ಗೆ ಗೊತ್ತಿಲ್ಲ. ತೆಲಂಗಾಣದ ತಾಂಡೂರು ಶಾಸಕ ರೋಹಿತ್‌ ರೆಡ್ಡಿ ನನ್ನ ಸ್ನೇಹಿತ. ಅವರು ನಂಗೆ ಸಿಎಂರನ್ನ ಭೇಟಿ ಮಾಡಿಸಿದ್ರು. ನಮ್ಮ ಭೇಟಿಯಲ್ಲಿ ಯಾವುದೇ ರಾಜಕೀಯ ಚರ್ಚೆ ಇರಲಿಲ್ಲ. ಅದು ಒಂದು ಸೌಜನ್ಯದ ಭೇಟಿಯಾಗಿತ್ತು ಅಂತ ಹೇಳಿದ್ದಾರೆ. ಇನ್ನು ಇದರೆಲ್ಲರ ಮಧ್ಯೆ ಮೈಸೂರಿನಲ್ಲಿ ಜಮೀರ್ ಮಾಜಿ ಸಿಎಂ ಸಿದ್ದರಾಮಯ್ಯ ಅವ್ರನ್ನ ಭೇಟಿ ಮಾಡಿ, ಗೌಪ್ಯ ಮಾತುಕತೆ ನಡೆಸಿದ್ದಾರೆ.‌

-masthmagaa.com

Contact Us for Advertisement

Leave a Reply