masthmagaa.com:
ಇಂದು ಕಲಬುರಗಿಯಲ್ಲಿ ಬಿಜೆಪಿ ಒಬಿಸಿ ಬೃಹತ್ ಸಮಾವೇಶ ಆಯೋಜಿಸಿತ್ತು. ಈ ವೇಳೆ ಮಾತಾಡಿ ಸಿಎಂ ಬೊಮ್ಮಾಯಿ, ನಾನು ಬರಿ ಕೈಯಲ್ಲಿ ಬಂದಿಲ್ಲ ಅಂತೇಳಿ, ತಳವಾರ ಪರಿವಾರ ಸಮುದಾಯವನ್ನ ಒಬಿಸಿಯಿಂದ ಕೈಬಿಟ್ಟ ಡಾಕುಮೆಂಟ್ನ್ನ ತೋರಿಸಿದ್ದಾರೆ. ಇಷ್ಟು ದಿನ ಹಿಂದುಳಿದ ವರ್ಷಗದವ್ರನ್ನ ಕತ್ತಲಲ್ಲಿ ಇಡಲಾಗಿತ್ತು. ನಿಮ ಮತವನ್ನ ಉಪಯೋಗಿಸಿಕೊಳ್ಳಲಾಗ್ತಿತ್ತು. ಈಗ ಬದಲಾವಣೆ ಸಮಯ ಬಂದಿದೆ ಅಂತ ಹೇಳಿದ್ದಾರೆ. ಇನ್ನು ಕಾರ್ಯಕ್ರಮದಲ್ಲಿ ಮಾತಾಡಿದ ಮಾಜಿ ಸಿಎಂ ಯಡಿಯೂರಪ್ಪ ಕೇವಲ ವೋಟ್ ಬ್ಯಾಂಕ್ ರಾಜಕೀಯ ಮಾಡ್ಕೊಂಡು ಒಬಿಸಿ ಜನಾಂಗವನ್ನ ಮುಖ್ಯವಾಹಿನಿಗೆ ತರದೆ ದ್ರೋಹ ಮಾಡಿದ್ದಾರೆ. ನಾನು ಮೈಸೂರಿಂದ ರಥಯಾತ್ರೆ ಬರ್ತೇನೆ, ಬೊಮ್ಮಾಯಿ ಅವ್ರು ಈ ಕಡೆಯಿಂದ ಬರ್ತಾರೆ ದಾವಣಗೆರೆಯಲ್ಲಿ ಓಟ್ಟಾಗಿ ಸೇರಿ ನಮ್ಮ ಶಕ್ತಿ ಪ್ರದರ್ಶನ ಮಾಡ್ತೀವಿ ಎಂದಿದ್ದಾರೆ. ಇನ್ನು ಇದಕ್ಕೆ ಪ್ರತಿಕ್ರಿಯಿಸಿದ ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿ ನಾನು ಒಂದೊಂದು ಸಮಾಜಕ್ಕೆ ಒಂದೊಂದು ಸಮಾವೇಶ ಮಾಡಲ್ಲ. ನಾಡಿನ ಸಮಸ್ಯೆ ಪರಿಹಾರಕ್ಕೆ ಕೆಲಸ ಮಾಡ್ತೀನಿ ಎಂದಿದ್ದಾರೆ.
-masthmagaa.com
Contact Us for Advertisement