masthmagaa.com:
ಕೇರಳದಲ್ಲಿ ಬೀದಿ ನಾಯಿಗಳ ಉಪಟಳ ಹೆಚ್ಚಾಗ್ತಿರೊ ಹಿನ್ನೆಲೆಯಲ್ಲಿ ಅಲ್ಲಿನ ಸರ್ಕಾರ ಸುಪ್ರೀಂಕೋರ್ಟ್ ಮೆಟ್ಟಿಲೇರಿದೆ. ಆಕ್ರಮಣಕಾರಿ ಹಾಗೂ ರೇಬೀಸ್ ಸೋಂಕಿಗೆ ಒಳಗಾಗಿರೊ ನಾಯಿಗಳನ್ನ ಕೊಲ್ಲೋದಕ್ಕೆ ಅನುಮತಿ ಕೇಳಿದೆ. ಇತ್ತೀಚೆಗೆ ಕೇರಳದಲ್ಲಿ ಬೀದಿನಾಯಿಗಳ ದಾಳಿಗಳು ಹೆಚ್ಚಿನ ಸಂಖ್ಯೆಯಲ್ಲಿ ವರದಿಯಾಗ್ತಿವೆ. ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಅಂತ ಸಾರ್ವಜನಿಕರಿಂದ ತೀವ್ರ ಒತ್ತಡ ಕೇಳಿ ಬರ್ತಿದೆ. ಇದರ ಬೆನ್ನಲ್ಲೇ ಇತ್ತ ಕೇರಳ ಸರ್ಕಾರ ಸೆಪ್ಟಂಬರ್ 20ರಿಂದ ಅಕ್ಟೋಬರ್ 20 ರವರೆಗೆ ಬೀದಿ ನಾಯಿಗಳಿಗೆ ಸಾಮೂಹಿಕ ಲಸಿಕಾ ಅಭಿಯಾನವನ್ನ ಹಮ್ಮಿಕೊಂಡಿದೆ.
-masthmagaa.com
Contact Us for Advertisement