masthmagaa.com:
ಮಹತ್ವದ ಬೆಳವಣಿಗೆಯಲ್ಲಿ ಮೋದಿ ಕ್ಯಾಬಿನೆಟ್ನಲ್ಲಿ ದಿಢೀರ್ ಬದಲಾವಣೆಯಾಗಿದೆ. ಸುಪ್ರೀಂಕೋರ್ಟ್ ಮತ್ತು ಕೊಲಿಜಿಯಂ ವ್ಯವಸ್ಥೆ ವಿರುದ್ಧ ನಿರಂತರ ಟೀಕೆ ಮಾಡ್ತಿದ್ದ ಕೇಂದ್ರ ಕಾನೂನು ಸಚಿವ ಕಿರಣ್ ರಿಜಿಜು ಅವ್ರನ್ನ ದಿಢೀರ್ ಅಂತ ಬದಲಿಸಲಾಗಿದೆ. ಅವರ ಜಾಗದಲ್ಲಿ ಅರ್ಜುನ್ ರಾಮ್ ಮೇಘವಾಲ್ರನ್ನ ನೂತನ ಕಾನೂನು ಸಚಿವರನ್ನಾಗಿ ನೇಮಿಸಲಾಗಿದೆ. ಜೊತೆಗೆ ರಿಜಿಜು ಅವ್ರಿಗೆ ಭೂ ವಿಜ್ಞಾನ ಖಾತೆ ನೀಡಲಾಗಿದೆ. ಈ ಹಿಂದೆ ಜಿತೇಂದ್ರ ಸಿಂಗ್ ಅವ್ರು ಈ ಖಾತೆಯನ್ನ ಹೊಂದಿದ್ರು. ಇನ್ನು ಸುಪ್ರೀಂಕೋರ್ಟ್ ಹಾಗೂ ಹೈಕೋರ್ಟ್ ನ್ಯಾಯಮೂರ್ತಿಗಳನ್ನ ನೇಮಕ ಮಾಡಲು ಜಾರಿಯಲ್ಲಿರುವ ಕೊಲಿಜಿಯಂ ವ್ಯವಸ್ಥೆ ಬಗ್ಗೆ ಕಿರಣ್ ರಿಜಿಜು ನಿರಂತರ ವಾಗ್ದಾಳಿ ನಡೆಸಿ ಸುದ್ಧಿಯಲ್ಲಿದ್ರು. ರಿಜಿಜು ಅವರ ಹೇಳಿಕೆಗೆ ಸುಪ್ರೀಂಕೋರ್ಟ್ ಕೂಡ ಅಸಮಾಧಾನ ವ್ಯಕ್ತಪಡಿಸಿತ್ತು. ಇಷ್ಟೆಲ್ಲಾ ಆದ್ರು ರಿಜಿಜು ಸುಪ್ರೀಂಕೋರ್ಟ್ ವಿಚಾರದಲ್ಲಿ ವಾಗ್ದಾಳಿ ನಡೆಸೋದನ್ನ ಮುಂದುವರೆಸಿದ್ದರು. ಇದೀಗ ರಿಜಿಜು ಅವರನ್ನ ಕಾನೂನು ಸಚಿವ ಸ್ಥಾನದಿಂದಲೇ ಬದಲಿಸಲಾಗಿದೆ.
-masthmagaa.com
Contact Us for Advertisement