masthmagaa.com:
ಮಂಡ್ಯ ಕ್ಷೇತ್ರದ ಪಕ್ಷೇತರ ಸಂಸದೆ ಸುಮಲತಾ ಇವತ್ತು ಕೆಆರ್ಎಸ್ ಡ್ಯಾಂ ಮತ್ತು ಬೇಬಿ ಬೆಟ್ಟಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ರು. ಈ ವೇಳೆ ಮಾತನಾಡಿದ ಅವರು, ಕೆಆರ್ಎಸ್ ಬಿರುಕು ಬಿಟ್ಟಿದೆ ಅಂತ ನಾನು ಎಲ್ಲೂ ಹೇಳಿಲ್ಲ. ಅಕ್ರಮ ಗಣಿಗಾರಿಕೆಯಿಂದ ಡ್ಯಾಂಗೆ ಸಮಸ್ಯೆ ಆಗೋದಿಲ್ವಾ ಅಂತ ಸಭೆಯಲ್ಲಿ ಅಧಿಕಾರಿಯೊಬ್ಬರಿಗೆ ಕೇಳಿದ್ದೇ ಅಷ್ಟೇ. ಅದನ್ನ ಇಷ್ಟು ದೊಡ್ಡದು ಮಾಡಿದ್ದಾರೆ. ಡ್ಯಾಂ ಸುತ್ತಮುತ್ತಲಿನ 20 ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಗಣಿಗಾರಿಕೆ ನಡೆಸಲೇ ಬಾರದು ಅಂತಿದೆ. ಅದು ಲೀಗಲ್ಲೋ, ಇಲ್ಲೀಗಲ್ಲೋ.. ಸರ್ಕಾರದವರು ಇಲ್ಲೇನು ನಡೀತಿಲ್ಲ ಅಂತ ಹೇಳ್ತಿದ್ದಾರೆ. ಆದ್ರೆ ಇಲ್ಲೇನೋ ನಡೀತಿದೆ ಅನ್ನೋದನ್ನ ತೋರಿಸುವ ಉದ್ದೇಶದಿಂದ ನಾನು ಬಂದಿದ್ದೇನೆ ಅಂತ ಹೇಳಿದ್ದಾರೆ. ಜೊತೆಗೆ ಡ್ಯಾಂನಲ್ಲಿ ಸಣ್ಣಪುಟ್ಟ ಬಿರುಕು ಬಿಟ್ಟಿತ್ತು. ಅದನ್ನ ಫಿಲ್ ಮಾಡಿದ್ದಾರೆ. ಡ್ಯಾಂ ಸುತ್ತಮುತ್ತ ನಡೀತಿರೋ ಗಣಿಗಾರಿಕೆಯಿಂದ ಮತ್ತಷ್ಟು ಅನಾಹುತ ಸಂಭವಿಸಬಾರದು ಅನ್ನೋದು ನನ್ನ ಬೇಡಿಕೆ. ಗಣಿಗಾರಿಕೆಯಿಂದ ಡ್ಯಾಂಗೆ ಏನೂ ಆಗಲ್ಲ ಅಂತಾದ್ರೆ ಅದಕ್ಕೊಂದು ಸರ್ಟಿಫಿಕೆಟ್ ಅಂಗೀಕರಿಸಲಿ. ಯಾವುದೇ ಕಾರಣಕ್ಕೂ ನನ್ನ ಹೋರಾಟದಿಂದ ಹಿಂದೆ ಸರಿಯೋದಿಲ್ಲ ಅಂತ ಸ್ಪಷ್ಟಪಡಿಸಿದ್ದಾರೆ. ಇನ್ನು ಸುಮಲತಾ ಭೇಟಿ ಬಗ್ಗೆ ಮಾಜಿ ಸಿಎಂ ಕುಮಾರಸ್ವಾಮಿ ಅವರನ್ನ ಕೇಳದ್ದಾಗ, ದೊಡ್ಡವರ ವಿಷ್ಯನ ನಂಗೆ ಕೇಳ್ಬೇಡಿ. ದೊಡ್ಡವರ ಬಗ್ಗೆ ನಾನ್ ಮಾತನಾಡಲ್ಲ ಅಂತ ಹೇಳಿದ್ದಾರೆ.
-masthmagaa.com
Contact Us for Advertisement