ಕೇಂದ್ರ ಸರ್ಕಾರಕ್ಕೆ 4 ಡಿಮ್ಯಾಂಡ್ ಇಟ್ಟ ಸಂಸದ ವರುಣ್ ಗಾಂಧಿ!

masthmagaa.com:

ಕೇಂದ್ರ ಸರ್ಕಾರದ ಕೃಷಿ ಕಾನೂನುಗಳನ್ನು ಮೊದಲಿಂದಲೂ ವಿರೋಧಿಸುತ್ತ ಬಂದಿರೋ ಬಿಜೆಪಿ ಸಂಸದ ವರುಣ್ ಗಾಂಧಿ ಪ್ರಧಾನಿ ಮೋದಿಗೆ ಒಂದು ಪತ್ರವನ್ನು ಆನ್​​ಲೈನ್​​ನಲ್ಲಿ ಪೋಸ್ಟ್​ ಮಾಡಿದ್ದಾರೆ. ಅದ್ರಲ್ಲಿ 4 ಬೇಡಿಕೆಗಳನ್ನು ಮುಂದಿಟ್ಟಿದ್ದಾರೆ. 1. ಕೃಷಿ ಸುಧಾರಣೆಗಳನ್ನು ವಿರೋಧಿಸಿ ನಡೆದ ಪ್ರತಿಭಟನೆಯಲ್ಲಿ 700 ರೈತರು ಪ್ರಾಣ ಕಳ್ಕೊಂಡಿದ್ದಾರೆ. ಅವರ ಕುಟುಂಬಗಳಿಗೆ ತಲಾ ಒಂದೊಂದು ಕೋಟಿ ರೂಪಾಯಿ ಪರಿಹಾರ ನೀಡಬೇಕು. 2.ರೈತರ ವಿರುದ್ಧ ರಾಜಕೀಯವಾಗಿ ಹೇರಲಾದ ಎಲ್ಲಾ ಕೇಸ್​​ಗಳನ್ನು ವಾಪಸ್ ಪಡೆದುಕೊಳ್ಳಬೇಕು. 3. ಎಂಎಸ್​​ಪಿಯನ್ನು ವಿಸ್ತರಿಸಬೇಕು. ಅಲ್ಲಿಯವರೆಗೆ ಪ್ರತಿಭಟನೆ ಅಂತ್ಯವಾಗೋದಿಲ್ಲ. 4. ಲಖೀಂಪುರ್​​ಖೇರಿ ಹಿಂಸಾಚಾರ ಪ್ರಕರಣ ನ್ಯಾಯಯುತವಾಗಿ ತನಿಖೆಯಾಗಬೇಕು. ಕೇಂದ್ರ ಸಚಿವ ಅಜಯ್ ಮಿಶ್ರಾ ಪುತ್ರ ಆಶಿಶ್ ಮಿಶ್ರಾ ಸೇರಿದಂತೆ ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಅಂತ ಬೇಡಿಕೆ ಇಟ್ಟಿದ್ದಾರೆ.

-masthmagaa.com

Contact Us for Advertisement

Leave a Reply