masthmagaa.com:
‘ಅಮಚಿ ಬೆಳಗಾಂವ್’ ಅಂದ್ರೆ ಬೆಳಗಾವಿ ನಮ್ದು ಅಂತ ನಾಡ ದ್ರೋಹಿಗಳಿಗೆ ಕುಮ್ಮಕ್ಕು ಕೊಡ್ತಿದ್ದ ಮಹಾರಾಷ್ಟ್ರ ಸರ್ಕಾರ ಇದೀಗ ತನ್ನ ಯೋಜನೆಯೊಂದನ್ನ ಬೆಳಗಾವಿಯಲ್ಲಿ ಅನುಷ್ಠಾನ ಮಾಡಿದೆ. ಮಹಾತ್ಮ ಜ್ಯೋತಿರಾವ್ ಫುಲೆ ಜನ ಆರೋಗ್ಯ ವಿಮೆ ಯೋಜನೆಯನ್ನ ಆರಂಭಿಸಿ ಸಹಾಯವಾಣಿಯನ್ನ ಕೂಡ ಸ್ಥಾಪಿಸಿದೆ. ಇದಕ್ಕೆ ವಿರೋಧ ವ್ಯಕ್ತಪಡಿಸಿ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಡಿಸಿ ನಿತೇಶ್ ಪಾಟೀಲ್ಗೆ ಮನವಿ ಸಲ್ಲಿಸಿದೆ. ಈ ಬಗ್ಗೆ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳೊದಾಗಿ ಡಿ.ಸಿ ಭರವಸೆ ನೀಡಿದ್ದಾರೆ. ಇಷ್ಟೆಲ್ಲ ನಡಿತಿದ್ರೂ ಅಲ್ಲಿನ ರಾಜಕಾರಣಿಗಳು ಮೌನಕ್ಕೆ ಶರಣಾಗಿರೋದು ವಿಪರ್ಯಾಸವಾಗಿದೆ.
-masthmagaa.com
Contact Us for Advertisement