ರಾಜ್ಯಸಭೆಯ ವಿಪಕ್ಷ ನಾಯಕನ ಸ್ಥಾನಕ್ಕೆ ಮಲ್ಲಿಕಾರ್ಜುನಾ ಖರ್ಗೆ ರಾಜೀನಾಮೆ!

masthmagaa.com:

ತೀವ್ರ ಕುತೂಹಲ ಕೆರಳಿಸಿರೋ ಕಾಂಗ್ರೆಸ್‌ನ ಅಧ್ಯಕ್ಷೀಯ ಚುನಾವಣೆಯಲ್ಲಿ ಈಗ ಶಶಿ ತರೂರ್‌, ಮಲ್ಲಿಕಾರ್ಜುನಾ ಖರ್ಗೆಗೆ ನೇರ ಸವಾಲು ಒಡ್ಡಲಿದ್ದಾರೆ. ಯಾಕಂದ್ರೆ ಅಧ್ಯಕ್ಷ ಚುನಾವಣೆಗೆ ನಾಮಪತ್ರ ಸಲ್ಲಿಸಿದ್ದ ಕಾಂಗ್ರೆಸ್‌ ನಾಯಕ ಕೆಎನ್‌ ತ್ರಿಪಾಟಿಯವರ (ಸಹಿಯಲ್ಲಿ ವ್ಯತ್ಯಾಸ ಇದೆ ಅಂತೇಳಿ) ಅವರು ಸಲ್ಲಿಸಿದ್ದ ನಾಮಪತ್ರವನ್ನ ರಿಜೆಕ್ಟ್‌ ಮಾಡಲಾಗಿದೆ. ಹೀಗಾಗಿ ಈ ಇಬ್ಬರು ದಕ್ಷಿಣ ಭಾರತೀಯರ ನಡುವೆಯೇ ಹಣಾಹಣಿ ನಡೆಯಲಿದ್ದು ಖರ್ಗೆಯೇ ಕಾಂಗ್ರೆಸ್‌ ಚುಕ್ಕಾಣಿ ಹಿಡಿಯೋದು ಬಹುತೇಕ ಪಕ್ಕಾ ಆಗಿದೆ. ಇದರ ನಡುವೆಯೇ ಇಂದು ಮೇಲ್ಮನೆಯ ವಿಪಕ್ಷ ನಾಯಕನ ಸ್ಥಾನಕ್ಕೆ ಮಲ್ಲಿಕಾರ್ಜುನ್‌ ಖರ್ಗೆ ರಾಜೀನಾಮೆ ನೀಡಿದ್ದಾರೆ. ಆ ಸ್ಥಾನಕ್ಕೆ ಮತ್ತೋರ್ವ ಕಾಂಗ್ರೆಸ್‌ ಹಿರಿಯ ನಾಯಕ ದಿಗ್ವಿಜಯ ಸಿಂಗ್‌ ಆಯ್ಕೆಯಾಗುವ ಸಾಧ್ಯತೆ ಇದೆ.

-masthmagaa.com

Contact Us for Advertisement

Leave a Reply