ಪಶ್ಚಿಮ ಬಂಗಾಳದಲ್ಲಿ ಹೊಸ ಆಧಾರ್‌ ಕಾರ್ಡ್‌ ಪರಿಚಯಿಸಿದ ದೀದಿ!

masthmagaa.com:

ಪಶ್ಚಿಮ ಬಂಗಾಳದಲ್ಲಿ ಪರ್ಯಾಯ ಆಧಾರ್‌ ಕಾರ್ಡ್‌ಗಳನ್ನ ಸಿಎಂ ಮಮತಾ ಬ್ಯಾನರ್ಜಿ ಘೋಷಿಸಿದ್ದಾರೆ. ಇತ್ತೀಚೆಗೆ ಆಧಾರ್‌ ಕಾರ್ಡ್‌ಗಳ ಪರಿಶೀಲನೆ ನಡೆಸಿದ್ದ ಕೇಂದ್ರ ಸರ್ಕಾರ, ಬಂಗಾಳದಲ್ಲಿ ಹಲವು ಜನ್ರ ಆಧಾರ್‌ ಕಾರ್ಡ್‌ಗಳನ್ನ ರದ್ದು ಗೊಳಿಸಿತ್ತು. ಇದಕ್ಕೆ ಪ್ರತಿಯಾಗಿ ಮಮತಾ, ಆಧಾರ್‌ ಕಾರ್ಡ್‌ಗಳು ರದ್ದಾಗಿರೋ ಜನರಿಗೆ ಪರ್ಯಾಯ ಆಧಾರ್‌ ಕಾರ್ಡ್‌ಗಳನ್ನ ನೀಡಲಾಗುತ್ತದೆ ಅಂತ ಹೇಳಿದ್ದಾರೆ. ಈ ವೇಳೆ ಮಾತನಾಡಿದ ಮಮತಾ, ಕೇಂದ್ರ ಸರ್ಕಾರ ಬೇಕಂತಲೇ ಈ ವಿಚಾರದಲ್ಲಿ SC, ST ಹಾಗೂ OBC ಸಮುದಾಯಗಳ ಜನರನ್ನ ಟಾರ್ಗೆಟ್‌ ಮಾಡಿದೆ. ಅಲ್ದೇ ರಾಜ್ಯ ಸರ್ಕಾರವನ್ನ ಕೇಳದೇ ಕೇಂದ್ರ ಸರ್ಕಾರ ರಾಜ್ಯದಲ್ಲಿ ಹಲವರ ಆಧಾರ್‌ಗಳನ್ನ ರದ್ದು ಮಾಡಿದೆ ಅಂತ ದೀದಿ ಕಿಡಿಕಾರಿದ್ದಾರೆ.

-masthmagaa.com

Contact Us for Advertisement

Leave a Reply